ದೇವನಹಳ್ಳಿ (ಬೆಂಗಳೂರು):ತಿರುಪತಿ ಪ್ರಸಾದ ಲಡ್ಡು ಕೊಡುವ ನೆಪದಲ್ಲಿ ಬಂದ ಸ್ನೇಹಿತ ತನ್ನ ಸ್ನೇಹಿತನ ಬೈಕ್ ಮತ್ತು ಎರಡು ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ದೇವನಹಳ್ಳಿ ಪಟ್ಟಣದ ಸರೋವರ ಸ್ಟ್ರೀಟ್ ಏರಿಯಾದ ನಿವಾಸಿ ಧನುಷ್ ಮತ್ತು ಹುಸ್ಸೇನ್ ಹಾಸ್ಟೆಲ್ ಸ್ನೇಹಿತರಾಗಿದ್ದವರು. ನವೆಂಬರ್ 27 ರ ಬೆಳಗ್ಗೆ ಫೋನ್ ಮಾಡಿದ ಹುಸ್ಸೇನ್ ತಿರುಪತಿಗೆ ಹೋಗಿದ್ದೆ ಪ್ರಸಾದ ಕೊಡಬೇಕೆಂದು ಹೇಳಿದ್ದಾನೆ.
ಮನೆಗೆ ಬರುವಂತೆ ಧನುಷ್ ಹೇಳಿದ್ದು, ಹುಸ್ಸೇನ್ ಜೊತೆಗೆ ಆತನ ಸ್ನೇಹಿತ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಸಹ ಬಂದಿದ್ದ. ಈತ ಹುಸ್ಸೇನ್ ಗೆ ರೈಲಿನಲ್ಲಿ ಪರಿಚಯವಾಗಿದ್ದನಂತೆ.