ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಹಾವಳಿ ಮತ್ತೆ ಮುಂದುವರೆದಿದೆ. ಸಾಯಿ ಕೃಷ್ಣ ಎಂಬುವರ ಟಿವಿಎಸ್ ಸ್ಟಾರ್ ಬೈಕ್ನ ಲಾಕ್ ಅನ್ನು ಕ್ಷಣಾರ್ಧದಲ್ಲಿ ಮುರಿದು ಬೈಕ್ ಕದ್ದಿರುವ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ.
ಕ್ಷಣಮಾತ್ರದಲ್ಲಿ ಬೈಕ್ ಎಗರಿಸಿದ ಕಳ್ಳರು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bike thieves at Eejipura of vivekanagara
ಸಾಯಿ ಕೃಷ್ಣ ಎಂಬುವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬಂದು ಮನೆಯ ಬಳಿ ತಮ್ಮ ಬೈಕ್ ಪಾರ್ಕಿಂಗ್ ಮಾಡಿದ್ದಾರೆ. ಇದನ್ನು ಟಾರ್ಗೆಟ್ ಮಾಡಿದ ಇಬ್ಬರು ಯುವಕರು, ಕ್ಷಣಮಾತ್ರದಲ್ಲಿಯೇ ಆ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ.
![ಕ್ಷಣಮಾತ್ರದಲ್ಲಿ ಬೈಕ್ ಎಗರಿಸಿದ ಕಳ್ಳರು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ , Bike theft in Bangalore](https://etvbharatimages.akamaized.net/etvbharat/prod-images/768-512-5261935-thumbnail-3x2-nin.jpg)
ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ
ಸಾಯಿ ಕೃಷ್ಣ ಅವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬಂದು ಮನೆಯ ಬಳಿ ತಮ್ಮ ಬೈಕ್ ಪಾರ್ಕಿಂಗ್ ಮಾಡಿದ್ದಾರೆ. ಇದನ್ನು ಟಾರ್ಗೆಟ್ ಮಾಡಿದ ಇಬ್ಬರು ಯುವಕರು, ಕ್ಷಣಮಾತ್ರದಲ್ಲಿಯೇ ಆ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ. ವಿಚಿತ್ರ ಎಂದರೆ ಈ ಇಬ್ಬರೂ ಕಳ್ಳರು ಶೂ ಹಾಕಿ ನಡೆದರೆ ಶಬ್ದ ಬರುತ್ತದೆ ಎಂದು ಅರಿತು ಅವುಗಳನ್ನು ಕೈನಲ್ಲೇ ಹಿಡಿದುಕೊಂಡು ವಿವೇಕನಗರದ ಏರಿಯಾ ಪೂರ್ತಿ ತಿರುಗಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳತನ
ಈ ಇಬ್ಬರ ಖತರ್ನಾಕ್ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಯಿ ಕೃಷ್ಣ ಅವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.