ಕರ್ನಾಟಕ

karnataka

ETV Bharat / state

ಬೈಕ್ ತಾಗಿಸಿದ ನೆಪದಲ್ಲಿ ಔಡಿ ಕಾರು ಚಾಲಕನ ಕಿರಿಕ್; ನಡುರಸ್ತೆಯಲ್ಲೇ ಗುಂಡು ಹಾರಿಸಿ ಎಸ್ಕೇಪ್ - ಎಂ.ಎಸ್ ರಾಮಯ್ಯ ಆಸ್ಪತ್ರೆ

ಕ್ಷುಲ್ಲಕ ಕಾರಣಕ್ಕೆ ಐಷಾರಾಮಿ ಔಡಿ ಕಾರು ಚಾಲಕ ಗಲಾಟೆ ನಡೆಸಿ ಬೈಕ್ ಸವಾರನ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆಯ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

bike-rider-closely-escaped-from-firing-by-the-audi-car-driver-in-road-rampage
ಬೈಕ್ ಸವಾರನ ಕಡೆ ಗುಂಡು ಹಾರಿಸಿದ ಕಾರು ಚಾಲಕ

By

Published : Oct 14, 2021, 11:15 AM IST

ಬೆಂಗಳೂರು: ರಸ್ತೆಯಲ್ಲಿ ಬೈಕ್ ಸವಾರ ತನ್ನ ಕಾರಿಗೆ ಬೈಕ್ ತಾಗಿಸಿದ್ದಾನೆ ಎಂದು ಸಿಟ್ಟಿಗೆದ್ದ ಔಡಿ ಕಾರು ಚಾಲಕ ಬೈಕ್ ಸವಾರನ ಕಡೆ ಎರಡು ಸುತ್ತು ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಯಶವಂತಪುರ ಠಾಣಾ ವ್ಯಾಪ್ತಿಯ ಎಂ.ಎಸ್.ರಾಮಯ್ಯ ಆಸ್ಪತ್ರೆ ಹಿಂಬದಿಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಾರಿಗೆ ಬೈಕ್ ತಾಗಿಸಿದ ನೆಪದಲ್ಲಿ ಬೈಕ್ ಸವಾರ ಅನಿಲ್​ ಎಂಬವರ ಜೊತೆ ಕಾರು ಚಾಲಕ ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ಕಾರು ಚಾಲಕ ಪಿಸ್ತೂಲು ತೆಗೆದು ಅನಿಲ್ ಕಡೆ ಗುಂಡು ಹಾರಿಸಿದ್ದಾನೆ. ಆದರೆ ಎರಡು ಗುಂಡುಗಳು ಅನಿಲ್​ಗೆ ತಗುಲಿಲ್ಲ. ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ವೃತ್ತಿಯಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿರುವ ಅನಿಲ್, ನಿನ್ನೆ ರಾತ್ರಿ ಕೆಲಸ ಮುಗಿಸಿ ಸುಮಾರು 9.30ರ ಸಮಯಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಯಶವಂತಪುರ ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿದ್ದು, ಬೈಕ್ ಸವಾರನ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳದಲ್ಲಿ ಸಿಕ್ಕ ಬುಲೆಟ್ ಅನ್ನು ಪೊಲೀಸರು​ ವಶಕ್ಕೆ ಪಡೆದಿದ್ದಾರೆ. ಆರೋಪಿಯ ಪತ್ತೆಗಾಗಿ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಫೇಸ್‌ಬುಕ್​​​​ನಲ್ಲಿ ಬಂದ ಲಿಂಕ್ ಕ್ಲಿಕ್ಕಿಸಿ 60 ಸಾವಿರ ಕಳೆದುಕೊಂಡ ವ್ಯಕ್ತಿ! ವಂಚಕರ ಬಗ್ಗೆ ಎಚ್ಚರವಹಿಸಿ..

ABOUT THE AUTHOR

...view details