ಬೆಂಗಳೂರು: ಮೈಸೂರು ರಸ್ತೆಯ ಮೇಲ್ಸೇತುವೆ ಕೆಳಗೆ ಕೆಸರಿನಿಂದ ಏಕಾಏಕಿ ಏಳೆಂಟು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಮೈಸೂರು ರಸ್ತೆಯಲ್ಲಿ ಕೆಸರೋ ಕೆಸರು... ಜಾರಿ ಬಿದ್ದ ಬೈಕ್ ಸವಾರರು - Traffic cops
ಮೈಸೂರು ರಸ್ತೆ ಮೇಲ್ಸೇತುವೆ ರಸ್ತೆ ಬಳಿ ಎಂದಿನಂತೆ ಇಂದೂ ಸಹ ಬೈಕ್ ಚಲಾಯಿಸಿದ ಸವಾರರು, ರಸ್ತೆಯಲ್ಲಿ ಕೆಸರು ಇರುವುದನ್ನು ಗಮನಿಸದೇ ಏಕಾಏಕಿ ಬೈಕ್ನಿಂದ ಬಿದ್ದು ಗಾಯಗೊಂಡಿದ್ದಾರೆ.

bike-rider-caught-in-the-mud
ಕೆಸರಿನಿಂದ ಜಾರಿ ಬಿದ್ದ ಬೈಕ್ ಸವಾರರು
ಮೈಸೂರು ರಸ್ತೆ ಮೇಲ್ಸೇತುವೆ ರಸ್ತೆ ಬಳಿ ಎಂದಿನಂತೆ ಬೈಕ್ ಸವಾರರು ಹೋಗಿದ್ದಾರೆ. ಕೆಸರು ಇರುವುದನ್ನು ಅರಿಯದ ಬೈಕ್ ಸವಾರರು ನೋಡು ನೋಡುತ್ತಿದ್ದಂತೆ ಜಾರಿ ಬಿದ್ದಿದ್ದಾರೆ. ಇದೇ ರೀತಿ ಏಳೆಂಟು ಬೈಕ್ ಸವಾರರು ಬಿದ್ದಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸರು ಸ್ಥಳದಲ್ಲಿ ಬ್ಯಾರಿಗೇಟ್ ಹಾಕಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಸಿಟಿ ಮಾರ್ಕೆಟ್ ಇನ್ಸ್ಪೆಕ್ಟರ್ ಮಾತನಾಡಿ, ಸಮೀಪದಲ್ಲೇ ಮಾರುಕಟ್ಟೆಯಲ್ಲಿ ಕೊತ್ತಂಬರಿ ಮಾರಾಟದ ಜಾಗವಿದ್ದು, ಇಲ್ಲಿಗೆ ಬರುವ ವಾಹನಗಳಿಂದಾಗುವ ಗಲೀಜು ಹಾಗೂ ಮಳೆ ಬಿದ್ದಿದ್ದರಿಂದ ರಸ್ತೆಯು ಕೆಸರಿನಂತಾಗಿದೆ ಎಂದು ತಿಳಿಸಿದ್ದಾರೆ.