ಬೆಂಗಳೂರು: ವಾಹನ ದಟ್ಟಣೆಯ ಪರಿಣಾಮ ಶೀಘ್ರವಾಗಿ ಆಸ್ಪತ್ರೆ ತಲುಪಿ ಅಪಘಾತಕ್ಕೀಡಾದವರ ಪ್ರಾಣ ಉಳಿಸಲೆಂದೇ ಏಪ್ರಿಲ್ 2015 ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಬೈಕ್ ಆಂಬುಲೆನ್ಸ್ ಸೇವೆ ಆರಂಭಿಸಿತ್ತು. ಈ ಸೇವೆಯಿಂದ ಸಾರ್ವಜನಿಕರಿಗೆ ಅನುಕೂಲವಾದ ನಿಟ್ಟಿನಲ್ಲಿ, ಕಳೆದ 2019-20 ರ ಬಿಬಿಎಂಪಿ ಬಜೆಟ್ನಲ್ಲಿ ಪ್ರತಿ ವಾರ್ಡ್ಗೂ ಒಂದು ಬೈಕ್ ಆಂಬುಲೆನ್ಸ್ ಸೇವೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದಕ್ಕಾಗಿ ₹ 2 ಕೋಟಿ ತೆಗೆದಿರಿಸಲಾಗಿದೆ. ಆದರೆ ಈಗ ಇಂಥದ್ದೊಂದು ಯೋಜನೆ ಇದೆ ಅನ್ನೋದನ್ನು ಪಾಲಿಕೆ ಮತ್ತು ಪಾಲಿಕೆಯ ಆರೋಗ್ಯ ಇಲಾಖೆ ಮರೆತೇ ಬಿಟ್ಟಿದೆ!
ಈ ಕುರಿತು ಮೇಯರ್ ಗಂಗಾಂಬಿಕೆ ಅವರನ್ನು ಪ್ರಶ್ನಿಸಿದರೆ, 2019-20ರ ಬಜೆಟ್ನಲ್ಲಿ ₹ 2 ಕೋಟಿ ಮೀಸಲಿಡಲಾಗಿದೆ. ಫೆಬ್ರವರಿಯಲ್ಲಿ ಬಜೆಟ್ ಮಂಡನೆ ನಂತರ ಅನುಮೋದನೆಗೆ ಮುಂದಾದಾಗ ಲೋಕಸಭೆ ಎಲೆಕ್ಷನ್ನಿಂದಾಗಿ ಜೂನ್ನಲ್ಲಿ ನಮಗೆ ಅನುಮೋದನೆ ಸಿಕ್ಕಿತ್ತು. ಆದರೆ ಇದರ ನಡುವೆ ಹಳೆ ಸರ್ಕಾರ ಹೋಗಿ ಹೊಸ ಸರ್ಕಾರ ರಚನೆಯಾಯಿತು. ಹೊಸ ಸರ್ಕಾರ ಬಂದ್ಮೇಲೆ ಕ್ಯಾಬಿನೆಟ್ನಲ್ಲಿ ಅನುಮೋದನೆ ಮಾಡಿಲ್ಲ ಅನ್ನೋ ಕಾರಣ ತಡೆಹಿಡಿಯಲಾಯಿತು.ಈಗ ಬೈಕ್ ಆಂಬುಲೆನ್ಸ್ಗೆ ಹಣ ಬಿಡುಗಡೆ ಮಾಡಲಾಗಿದ್ದು, ಆದಷ್ಟು ಬೇಗ ಆಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.