ಕರ್ನಾಟಕ

karnataka

ETV Bharat / state

ಕಮಿಷನರ್‌ ಪಂತ್‌ 'ಸುಳ್ಳು ಹೇಳುತ್ತಾರೆಂದ' ರಾಜಕಾರಣಿಗೆ ತಿಳಿ ಹೇಳ್ಬೇಕಿದೆ.. ಬಿಜೆಪಿ ನಾಯಕರ ವಿರುದ್ಧ ಭಾಸ್ಕರ್ ರಾವ್ ಟ್ವೀಟೇಟು - ಜೆ ಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್​ ಮಾಡಿದ ಭಾಸ್ಕರ್ ರಾವ್

ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಮೇಲೆ ಆಪ್​​ ಮುಖಂಡ ಭಾಸ್ಕರ್​ ರಾವ್​​ ಹರಿಹಾಯ್ದಿದ್ದಾರೆ.ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಆ ರಾಜಕಾರಣಿಗೆ ಸರಿಯಾಗಿ ತಿಳಿಹೇಳಬೇಕು ಎಂದು ಆಗ್ರಹ ಮಾಡಿದ್ದಾರೆ..

ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಭಾಸ್ಕರ್ ರಾವ್ ವಾಗ್ದಾಳಿ
ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಭಾಸ್ಕರ್ ರಾವ್ ವಾಗ್ದಾಳಿ

By

Published : Apr 11, 2022, 5:20 PM IST

ಬೆಂಗಳೂರು: ಜೆ ಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಮೇಲೆ ಆಪ್​​ ಮುಖಂಡ ಭಾಸ್ಕರ್​ ರಾವ್​​ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಭಾಸ್ಕರ್​ ರಾವ್​​​ ಟ್ವೀಟ್​ಗೆ ಬಿಜೆಪಿ ನಾಯಕರು ಸಹ ಮರು ಟ್ವೀಟ್​ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ಜವಾಬ್ದಾರಿಯುತವಾದ ಪೊಲೀಸ್ ಸಂಸ್ಥೆಯ ಆಯುಕ್ತರನ್ನು ಆಡಳಿತ ಪಕ್ಷದ ಹಿರಿಯ ನಾಯಕರು 'ಸುಳ್ಳು ಹೇಳುತ್ತಾರೆ' ಎಂದಿರುವುದು ಸರ್ಕಾರ, ಮುಖ್ಯಮಂತ್ರಿಗಳನ್ನು ಅಪಮಾನಿಸಿದಂತೆ. ಆಡಳಿತರೂಢ ಪಕ್ಷ ತನ್ನ ಹಿರಿಯ ನಾಯಕರಿಗೆ ತಿಳಿ ಹೇಳುತ್ತದೆ ಎಂದು ಸಾರ್ವಜನಿಕರ ಅಪೇಕ್ಷೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಾಳೆ ವಿಎಸ್​ಕೆ ವಿವಿ 9ನೇ ಘಟಿಕೋತ್ಸವ : ಮೂವರಿಗೆ ಗೌರವ ಡಾಕ್ಟರೇಟ್​

ಪೊಲೀಸ್ ಆಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಿನ್ನಾಭಿಪ್ರಾಯವಿದ್ದರೆ ನೇರವಾಗಿ ಭೇಟಿ ಮಾಡುವುದು ಸೂಕ್ತ. ಹೀಗೆ ಬಹಿರಂಗವಾಗಿ 1.5 ಕೋಟಿ ನಾಗರಿಕರನ್ನು ರಕ್ಷಣೆ ಮಾಡುವ ಸಂಸ್ಥೆಯನ್ನು ಅವಮಾನ ಮಾಡಲಾಗಿದೆ. ಇದು ಅವಿವೇಕತನದ ರಾಜಕೀಯ ಎಂದು ಬರೆದುಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details