ಕರ್ನಾಟಕ

karnataka

ETV Bharat / state

ಅರೆಸ್ಟ್​ ಆದ ಆರೋಪಿಗಳಿಗೆ ಮೊದಲು ಕೊರೊನಾ ಟೆಸ್ಟ್​ ಮಾಡಿಸಿ, ಬಳಿಕ ಠಾಣೆಗೆ ಕರೆ ತನ್ನಿ: ಭಾಸ್ಕರ್​ ರಾವ್​​ - Police Commissioner Bhaskar Rao news

ಸಿಲಿಕಾನ್​ ಸಿಟಿ ಪೊಲೀಸರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದನ್ನು ನಿಯಂತ್ರಿಸಲು ಆರೋಪಿಗಳ ಬಂಧನದ ಬಳಿಕ ಠಾಣೆಗೆ ಕರೆದೊಯ್ಯದೆ ನೇರವಾಗಿ ಆಸ್ಪತ್ರೆಗೆ ಕರೆದುಕೊಂಡು ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ನಗರದ ಎಲ್ಲಾ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೆ ನಗರ ಪೊಲೀಸ್​ ಆಯುಕ್ತರು ತಾಕೀತು ಮಾಡಿದ್ದಾರೆ.

Bhaskar Rao
ಭಾಸ್ಕರ್ ರಾವ್

By

Published : Jun 19, 2020, 6:49 PM IST

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡ ಆರೋಪಿಗಳನ್ನು ಸೆರೆ ಹಿಡಿದಾಗ ಮೊದಲು ಠಾಣೆಗೆ ಕರೆದೊಯ್ಯದೆ ನೇರವಾಗಿ ಕೊರೊನಾ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ‌ ನೀಡಿದ್ದಾರೆ.

ನಗರದಲ್ಲಿ ದಿನೇ ದಿನೆ ಪೊಲೀಸರಲ್ಲಿ ಕೊರೊನಾ‌ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಅನ್​ಲಾಕ್ ಬಳಿಕ ಕಳೆದ 15 ದಿನಗಳ ಅಂತರದಲ್ಲಿ 36 ಪೊಲೀಸರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಈ ಪೈಕಿ ಆರು ಮಂದಿ ಡಿಸ್ಚಾರ್ಚ್ ​ಆಗಿದ್ದರೆ, ವಿವಿಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ಐ ಮೃತಪಟ್ಟಿರುವುದು ವಿಷಾದನೀಯ. ಸೋಂಕು ಕಾಣಿಸಿಕೊಂಡ ಸಿಬ್ಬಂದಿಗೆ ಉತ್ತಮ ಆಸ್ಪತ್ರೆಯಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಅಪರಾಧ ಪತ್ತೆ ಜೊತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದನ್ನು‌ ಮರೆಯದಿರಿ. ಧೈರ್ಯವಾಗಿ ಕೆಲಸ ಮಾಡಿ, ನಿಮ್ಮೊಂದಿಗೆ ಸದಾ‌ ಪೊಲೀಸ್ ಇಲಾಖೆ ಇರಲಿದೆ ಎಂದು‌ ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಆರೋಪಿಗಳನ್ನು ಠಾಣೆಗೆ ಕರೆ ತರುವಾಗ ಈ ಕ್ರಮಗಳನ್ನು ಅನುಸರಿಸಿ:

ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಹೊರ ರಾಜ್ಯ ಅಥವಾ ಹೊರ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದಾಗ ಮೊದಲು ಕೊರೊನಾ‌ ಸ್ವ್ಯಾಬ್ ಟೆಸ್ಟ್​ಗೆ ಒಳಪಡಿಸಿ. ಆರೋಪಿಗಳು ಎಲ್ಲೆಲ್ಲೋ ತಿರುಗಾಡಿರುತ್ತಾರೆ. ಕನಿಷ್ಠ ಪಕ್ಷ ಸ್ವಚ್ಛತೆಯೂ ಕಾಪಾಡಿಕೊಳ್ಳದೆ ಕೊರೊನಾ‌ ನಿಯಂತ್ರಿತ ಪ್ರದೇಶಗಳಲ್ಲೂ ಸುತ್ತಾಡಿರುತ್ತಾರೆ. ಕೊರೊನಾ ಟೆಸ್ಟ್ ಮುಗಿದ ಬಳಿಕ‌ ಆರೋಪಿಗಳು ಕ್ಲೀನ್​ ಆಗಿ ಇರುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಪ್ರತಿದಿನ ಬಿಸಿ ನೀರು ಕುಡಿಯುವುದನ್ನು ಮರೆಯದಿರಿ ಎಂದು ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ABOUT THE AUTHOR

...view details