ಬೆಂಗಳೂರು :ನಗರದ ವಿದ್ಯಾಸಾಗರ್ ಶಾಲೆ ತರಗತಿಯಲ್ಲಿ ಬೋರ್ಡ್ ಮೇಲೆ ಬರಹ ಬರೆದು ಮಕ್ಕಳನ್ನು ಅವಮಾನಿಸಿದ ಆರೋಪದ ಮೇಲೆ ಶಿಕ್ಷಕಿ ಶಶಿಕಲಾ ಅವರನ್ನು ವಜಾ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕಿ, ತಾವು ಹಿಜಾಬ್ ಕುರಿತು ಕೆಟ್ಟದಾಗಿ ಯಾವುದೇ ಮಾತನಾಡಿಲ್ಲ, ಅಲ್ಲದೆ ನನ್ನ ಮೇಲಿನ ಆರೋಪ ಸುಳ್ಳು ಎಂದಿದ್ದಾರೆ.
ವಜಾ ಆಗಿರುವ ಶಿಕ್ಷಕಿ ಶಶಿಕಲಾ ಸ್ಪಷ್ಟನೆ ನೀಡಿದ್ದು, ನಾನು ಯಾರಿಗೂ ಅವಮಾನ ಮಾಡಿಲ್ಲ. ಈ ವಿವಾದ ಹೇಗೆ ಬಂತು ಎಂದು ನನಗೆ ಶಾಕ್ ಆಗಿದೆ. ತರಗತಿಯಲ್ಲಿ ನಾನು ಯಾವುದೇ ಕೆಟ್ಟ ಮಾತು ಹೇಳಿಲ್ಲ. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಗಲಾಟೆ ಮಾಡಬೇಡಿ ಎಂದಿದ್ದೆ ಅಷ್ಟೇ ಎಂದಿದ್ದಾರೆ.
ನಡೆದಿದ್ದೇನು? :ನಗರದ ವಿದ್ಯಾಸಾಗರ್ ಶಾಲೆಯ ಶಿಕ್ಷಕಿ ತರಗತಿಯಲ್ಲಿ ಬೋರ್ಡ್ ಮೇಲೆ ಬರಹ ಬರೆದು ಮಕ್ಕಳನ್ನು ಅವಮಾನಿಸಿದ ಆರೋಪದ ಮೇಲೆ ಪೋಷಕರು, ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು.