ಕರ್ನಾಟಕ

karnataka

ಪೊಲೀಸ್​ ಠಾಣೆಗೆ ಬೆಂಕಿ, ಸಿಆರ್​ಪಿಎಫ್​ ವಾಹನ ಸುಟ್ಟು ಕರಕಲು: ಗಲಭೆಯ ಗಂಭೀರತೆಗೆ ಸಾಕ್ಷಿ ನೀಡುತ್ತಿವೆ ದೃಶ್ಯಗಳು

By

Published : Aug 12, 2020, 12:47 PM IST

ಡಿ.ಜೆ. ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಉದ್ರಿಕ್ತ ಜನರ ಗುಂಪು ಪೊಲೀಸ್​ ಠಾಣೆಗೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದು, ವಾಹನಗಳು ಸುಟ್ಟು ಕರಕಲಾಗಿವೆ.

Bengaluru riots update
ಸುಟ್ಟು ಕರಲಾದ ವಾಹನಗಳು

ಬೆಂಗಳೂರು:ಸಾಮಾಜಿಕ ಜಾಲತಾಣದ ಒಂದೇ ಒಂದು ಪೋಸ್ಟ್ ನಿನ್ನೆ ರಾತ್ರಿ ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ ಹಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿತ್ತು.

ಉದ್ರಿಕ್ತ ಜನರು ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಮಾತ್ರವಲ್ಲದೆ, ಭದ್ರತೆಗೆ ಬಂದಿದ್ದ ಸಿಆರ್​ಪಿಎಫ್​ ಸಿಬ್ಬಂದಿಯ ವಾಹಕ್ಕೂ ಬೆಂಕಿ ಹಚ್ಚಿದ್ದರು. ಪರಿಣಾಮ ಸಿಆರ್​ಪಿಎಫ್​ ಪೊಲೀಸರ ವಾಹನ ಸುಟ್ಟು ಕರಕಲಾಗಿದೆ. ಜೊತೆಗೆ ಡಿ.ಜೆ. ಹಳ್ಳಿ ಪೊಲೀಸ್​ ಠಾಣೆಯ ಬೊಲೆರೋ ವಾಹನವನ್ನೂ ಕೂಡ ಕಿಡಿಗೇಡಿಗಳು ಜಖಂಗೊಳಿಸಿದ್ದಾರೆ. ಇಷ್ಟೇ ಅಲ್ಲದೆ, ಡಿ.ಜೆ. ಹಳ್ಳಿ ಪೊಲೀಸ್​ ಠಾಣೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಠಾಣೆಯ ಒಂದು ಭಾಗಕ್ಕೆ ಹಾನಿಯಾಗಿದೆ.

ಸುಟ್ಟು ಕರಲಾದ ವಾಹನಗಳು

ರಸ್ತೆ ಬದಿ ನಿಲ್ಲಿಸಲಾಗಿದ್ದ ಹಲವು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಕೂಡ ಸುಟ್ಟು ಕರಲಾಗಿದ್ದು, ಘಟನಾ ಸ್ಥಳದ ಸದ್ಯದ ದೃಶ್ಯಗಳು ಗಲಭೆಯ ತೀವ್ರತೆಗೆ ಸಾಕ್ಷಿಯಾಗಿವೆ.

ABOUT THE AUTHOR

...view details