ಕರ್ನಾಟಕ

karnataka

ETV Bharat / state

ದರೋಡೆಗೆ ಹೊಂಚುಹಾಕುತ್ತಿದ್ದ ಐವರು ದರೋಡೆಕೋರರು ಸಿಸಿಬಿ ಬಲೆಗೆ - gangsters arrest

ಕಾರಿನಲ್ಲಿ ಕುಳಿತುಕೊಂಡು ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಹಲ್ಲೆ ಮಾಡಿ ಅವರಿಂದ ಚಿನ್ನಾಭರಣ ದೋಚಲು ಸ್ಕೆಚ್​ ಹಾಕಿದ್ದ ಐವರು ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದರೋಡೆಕೋರರು ಸಿಸಿಬಿ ಬಲೆಗೆ

By

Published : Sep 10, 2019, 6:10 AM IST

Updated : Sep 10, 2019, 6:24 AM IST

ಬೆಂಗಳೂರು : ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪದಡಿ ಐವರು ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೆಟ್ರೊ ಲೇಔಟ್​ ಬಳಿ ಕಾರಿನಲ್ಲಿ ಕುಳಿತುಕೊಂಡು ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಹಲ್ಲೆ ಮಾಡಿ ಅವರಿಂದ ಚಿನ್ನಾಭರಣ ದೋಚಲು ಸ್ಕೆಚ್​ ಹಾಕಿದ್ದ ರೌಡಿ ಡಿಯೊ ರವಿ, ಪ್ರತಾಪ್​, ಅಮೃತ್, ಸತೀಶ್​ ಹಾಗೂ ನವೀನ್​ ಕುಮಾರ್​ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳ ಪೈಕಿ ರವಿ ಎಂಬಾತ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕುಖ್ಯಾತ ರೌಡಿ ಅಭಿ ಯಾನೆ ಅಂದ್ರಹಳ್ಳಿ ಅಭಿ ಸಹಚರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಚಂದ್ರಾ ಲೇಔಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 10, 2019, 6:24 AM IST

ABOUT THE AUTHOR

...view details