ಕರ್ನಾಟಕ

karnataka

ETV Bharat / state

ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್​... ತಪ್ಪಿದ ಅನಾಹುತ - undefined

ಬನಶಂಕರಿಯಿಂದ ಹೆಬ್ಬಾಳಕ್ಕೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡು, ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.

ಬಿಎಂಟಿಸಿ

By

Published : Jul 13, 2019, 12:26 AM IST

Updated : Jul 13, 2019, 8:40 AM IST

ಬೆಂಗಳೂರು:ಬಿಎಂಟಿಸಿ ಬಸ್​​ನ ಇಂಜಿನ್​​ನಲ್ಲಿ ಬೆಂಕಿ ಹೊತ್ತಿಕೊಂಡು, ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾದ ಘಟನೆ ನಗರದ ಮಾರತ್ತಹಳ್ಳಿ ರಿಂಗ್ ರಸ್ತೆಯ ದೊಡ್ಡನೆಕ್ಕುಂದಿ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.

ಬನಶಂಕರಿಯಿಂದ ಹೆಬ್ಬಾಳಕ್ಕೆ ಸಂಚರಿಸುತ್ತಿದ್ದ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು‌ ಗಮನಿಸಿದ ಬಸ್​ ಚಾಲಕ ಪ್ರಯಾಣಿಕರನ್ನು‌ ಕೆಳಗಿಳಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಮಯಪ್ರಜ್ಞೆ ಮೆರೆದಿದ್ದಾನೆ.

ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್

ಬಳಿಕ ಬಸ್ ಚಾಲಕ ಹಾಗೂ ನಿರ್ವಾಹಕ ಬೆಂಕಿ ನಂದಿಸಲು ಯತ್ನಿಸಿದರು. ಅಲ್ಲದೆ ಇವರೊಟ್ಟಿಗೆ ಸಾರ್ವಜನಿಕರು ಕೈಜೋಡಿಸಿ ಬೆಂಕಿ ನಂದಿಸಿದರಾದರೂ ಬಸ್ ಸುಟ್ಟು ಕರಕಲಾಗಿದೆ.

Last Updated : Jul 13, 2019, 8:40 AM IST

For All Latest Updates

TAGGED:

ABOUT THE AUTHOR

...view details