ಕರ್ನಾಟಕ

karnataka

ETV Bharat / state

ಬೊಮ್ಮನಹಳ್ಳಿ ವ್ಯಕ್ತಿ ಹತ್ಯೆ ಪ್ರಕರಣ: ಗುಂಡು ಹಾರಿಸಿ ರೌಡಿಶೀಟರ್ ಬಂಧಿಸಿದ ಪೊಲೀಸರು

ಕಳೆದ 15 ದಿನಗಳ ಹಿಂದೆ ಬೆಂಗಳೂರಿನ ಬೊಮ್ಮನಹಳ್ಳಿ ಓಂ ಶಕ್ತಿ ಲೇಔಟ್​ನಲ್ಲಿ ನಡೆದಿದ್ದ ಹತ್ಯೆ ಪ್ರಕರಣದ ಆರೋಪಿ ರೌಡಿಶೀಟರ್​ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

By

Published : Sep 16, 2019, 4:50 AM IST

Updated : Sep 16, 2019, 6:46 AM IST

ಆರೋಪಿಗಳ ಜೊತೆ ಬೇಗೂರು ಇನ್​ಸ್ಪಕ್ಟರ್ ಮಂಜುನಾಥ್

ಬೆಂಗಳೂರು: ಕಳೆದ 15 ದಿನಗಳ ಹಿಂದೆ ಬೊಮ್ಮನಹಳ್ಳಿ ಓಂ ಶಕ್ತಿ ಲೇಔಟ್​ನಲ್ಲಿ ಸುನೀಲ್ ಎಂಬುವರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ರೌಡಿಶೀಟರ್ ಮೇಲೆ ಬೇಗೂರು ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಬೊಮ್ಮನಹಳ್ಳಿ ರೌಡಿಶೀಟರ್ ಶ್ರೀಧರ್ ಬಂಧಿತ ಆರೋಪಿ. ಕಳೆದ ಆ. 30ರಂದು ಬೊಮ್ಮನಹಳ್ಳಿ ಓಂ ಶಕ್ತಿ ಲೇಔಟ್ ನಲ್ಲಿ ಸುನೀಲ್ ಎಂಬುವರನ್ನು ಶ್ರೀಧರ್ ಹಾಗೂ ಆತನ ಸಹಚರರು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದರು.

ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆ ಕಾರ್ಯಕ್ಕೆ ಮುಂದಾದ ಬೇಗೂರು ಇನ್ಸ್​ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡವು ಬೇಗೂರಿನ ಕೊಪ್ಪ ಬಳ ನೀಲಗಿರಿ ತೋಪಿನಲ್ಲಿ ಆರೋಪಿ‌ ಶ್ರೀಧರ್ ಅಡಗಿ ಕುಳಿತುಕೊಂಡಿರುವ ಖಚಿತ ಮಾಹಿತಿ ಮೇರೆಗೆ ಆತನನ್ನು ಹಿಡಿಯಲು ಮುಂದಾಗಿದೆ.‌‌ ಈ ವೇಳೆ ಮುಖ್ಯಪೇದೆ ರಾಮಚಂದ್ರರ ಮೇಲೆ ಲಾಂಗು ಮಚ್ಚಿನಿಂದ ಹಲ್ಲೆ ಮಾಡಲು‌ ಮುಂದಾದಾಗ ಆತ್ಮರಕ್ಷಣೆಗಾಗಿ ಇನ್ಸ್​ಪೆಕ್ಟರ್ ಮಂಜುನಾಥ್ ಆರೋಪಿ ಶ್ರೀಧರನ ಬಲಗಾಲಿಗೆ ಗುಂಡು ಹಾರಿಸಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Sep 16, 2019, 6:46 AM IST

ABOUT THE AUTHOR

...view details