ಕರ್ನಾಟಕ

karnataka

ವಂದೇಮಾತರಂ ಹಾಡಲು ಒಪ್ಪದ ಸಿದ್ದರಾಮಯ್ಯ ನಮ್ಮ ದೇಶದವರಲ್ಲ: ಬಿಡಿಎ ಅಧ್ಯಕ್ಷ ವಿಶ್ವನಾಥ್

By

Published : Dec 1, 2022, 10:05 PM IST

ಸಂವಿಧಾನ ಸಂಸ್ಮರಣಾ ದಿನದಂದು ವೇದಿಕೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಂದೇ ಮಾತರಂ ಹಾಡಲು ಒಪ್ಪಿರಲಿಲ್ಲ. 60ಕ್ಕೆ ಅರಳೊ ಮರಳೊ ಅಂತಾರೆ, ಅಂತದ್ರಲ್ಲಿ ಸಿದ್ದರಾಮಯ್ಯ 75 ವರ್ಷದ ಹಿರಿಯರು. ಅವರು ಏನು ಮಾತನಾಡ್ತಾರೊ ಅದು ಅವರಿಗೆ ಗೊತ್ತಾಗಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ.

ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್
ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್

ಯಲಹಂಕ (ಬೆಂಗಳೂರು) :ವಂದೇ ಮಾತರಂ ಹಾಡಲು ಒಪ್ಪದ ಮಾಜಿ ಸಿಎಂ ಸಿದ್ದರಾಮಯ್ಯ ಭಾರತ ದೇಶದವರಲ್ಲ ಎನ್ನಬೇಕಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್​ ಕಿಡಿಿಕಾರಿದ್ದಾರೆ.

ಯಲಹಂಕ ತಾಲೂಕು ಬಳಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನ ಸಂಸ್ಮರಣಾ ದಿನದಂದು ವೇದಿಕೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಂದೇ ಮಾತರಂ ಹಾಡಲು ಒಪ್ಪಿರಲಿಲ್ಲ. 60ಕ್ಕೆ ಅರಳೊ ಮರಳೊ ಅಂತಾರೆ, ಅಂತಹುದರಲ್ಲಿ ಸಿದ್ದರಾಮಯ್ಯ 75 ವರ್ಷದ ಹಿರಿಯರು. ಅವರು ಏನು ಮಾತನಾಡ್ತಾರೊ ಅದು ಅವರಿಗೆ ಗೊತ್ತಾಗಲ್ಲ ಎಂದು ಟೀಕಿಸಿದರು.

ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿದರು

ಮುಂದುವರೆದು ಮಾತನಾಡಿದ ಅವರು, ಸ್ವಾತಂತ್ರ್ಯಕ್ಕೂ ಮೊದಲು ವಂದೇ ಮಾತರಂ ರಾಷ್ಟ್ರಗೀತೆಯಾಗಿತ್ತು. ಅದು ಸ್ವಾತಂತ್ರ್ಯ ಹೋರಾಟಗಾರರಿಗೆ ರೋಮಾಂಚನಕಾರಿ ಆಗಿತ್ತು. ಒಂದು ವರ್ಗದ ಮನವೊಲಿಸಲು ಸಿದ್ದರಾಮಯ್ಯ ಹೀಗೆ ಮಾಡ್ತಿದ್ದಾರೆ. ಜನರೇ ಅವರಿಗೆ ಬುದ್ದಿ ಕಲಿಸುತ್ತಾರೆ ಎಂದರು.

ಓದಿ:ಆರ್​ಎಸ್​ಎಸ್‌ನವರಿಗೆ​ ಸಮಾಜದ ಬದಲಾವಣೆ ಬೇಕಿಲ್ಲ: ಸಿದ್ದರಾಮಯ್ಯ

ABOUT THE AUTHOR

...view details