ಬೆಂಗಳೂರು: ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದವರ ವಿರುದ್ಧ ಬಿಡಿಎ ಇಂದು ಕಾರ್ಯಾಚರಣೆ ನಡೆಸಿದೆ.
40 ಕೋಟಿ ಮೌಲ್ಯದ ಆಸ್ತಿ ಒತ್ತುವರಿ ತೆರವು ಮಾಡಿದ ಬಿಡಿಎ - ಬಿಡಿಎ ಅಧಿಕಾರಿಗಳು ತೆರವು
ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ, ಶೆಡ್ ಹಾಕಿದ್ದರು. ಈ ಜಾಗವನ್ನು ಇಂದು ಬಿಡಿಎ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಒತ್ತುವರಿ ತೆರವು ಮಾಡಿದ ಬಿಡಿಎ
ನಾಗರಬಾವಿ ಗ್ರಾಮ ಸರ್ವೆ ನಂ.120 ರಲ್ಲಿನ 24 ಗುಂಟೆ ಜಾಗವನ್ನು ಒತ್ತುವರಿ ಮಾಡಲಾಗಿತ್ತು. 40 ಕೋಟಿ ಬೆಲೆಬಾಳುವ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಶೆಡ್ ನಿರ್ಮಿಸಿಕೊಂಡಿದ್ದರು.
ಈ ಜಾಗವನ್ನ ಗುರುತಿಸಿದ ಬಿಡಿಎ ಅಧಿಕಾರಿಗಳು, ಬಿಡಿಎ ಆಯುಕ್ತ ಜೆಸಿ ಪ್ರಕಾಶ್ ಆದೇಶದಂತೆ, ಬಿಡಿಎ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ತೆರವು ಮಾಡಿದೆ. ಅಲ್ಲದೇ ಜಾಗದ ಸುತ್ತ ಬಿಡಿಎ ಎಂದು ಬರೆದು ಬೇಲಿ ಹಾಕಲಾಗಿದೆ.