ಕರ್ನಾಟಕ

karnataka

By

Published : Aug 19, 2019, 10:22 PM IST

ETV Bharat / state

ಸರ್ಕಾರದಿಂದ ಬಿಬಿಎಂಪಿ ಬಜೆಟ್​ಗೆ ಬ್ರೇಕ್​... ಗಣೇಶ ಹಬ್ಬದ ಟೆಂಡರ್​ಗೆ ವಿಘ್ನ

ರಾಜ್ಯ ಸರ್ಕಾರದಿಂದ 2019-20 ರ ಬಿಬಿಎಂಪಿ ಬಜೆಟ್​ಗೆ ತಡೆಯಾಗಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಗಣೇಶ ನಿಮಜ್ಜನೆಗೂ ವಿಘ್ನ ಎದುರಾಗಿದೆ. ಸೆ. 2 ರ ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಪಾಲಿಕೆ ಮಾಡಬೇಕಾದ ಅಗತ್ಯ ಸಿದ್ಧತೆಗಳೇ ಇನ್ನೂ ಪೂರ್ಣಗೊಂಡಿಲ್ಲ.

ಗಣೇಶ ಹಬ್ಬಕ್ಕೂ ಬಿಬಿಎಂಪಿ ಟೆಂಡರ್ ವಿಘ್ನ

ಬೆಂಗಳೂರು: ರಾಜ್ಯ ಸರ್ಕಾರದಿಂದ 2019-20 ರ ಬಿಬಿಎಂಪಿ ಬಜೆಟ್ ತಡೆಯಾಗಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಗಣೇಶ ನಿಮಜ್ಜನಕ್ಕೂ ವಿಘ್ನ ಎದುರಾಗಿದೆ. ಸೆ. 2 ರ ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಪಾಲಿಕೆ ಮಾಡಬೇಕಾದ ಅಗತ್ಯ ಸಿದ್ಧತೆಗಳೇ ಪೂರ್ಣಗೊಂಡಿಲ್ಲ.

ಗಣೇಶ ಹಬ್ಬ ಹತ್ತಿರ ಬಂದ್ರೂ ಗಣೇಶ ನಿಮಜ್ಜನಕ್ಕೆ ಬೇಕಾದ ತಂಡಗಳಿಗೆ ಟೆಂಡರ್ ಕರೆದು, ವರ್ಕ್ ಆರ್ಡರ್ ನೀಡಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಕಳೆದ 10 ದಿನಗಳಿಂದ ಸರ್ಕಾರದ ಆನ್​ಲೈನ್ ಟೆಂಡರ್ ವ್ಯವಸ್ಥೆ ಸಮಸ್ಯೆಯಾಗಿದೆ. ಇ-ಪ್ರಕ್ಯೂರ್​ಮೆಂಟ್ ಮೂಲಕ ಬಿಬಿಎಂಪಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ ಅದು ಪೂರ್ಣಗೊಳ್ಳುತ್ತಿಲ್ಲ. ಪ್ರತಿವರ್ಷ ಹಬ್ಬಕ್ಕೂ ಒಂದು ತಿಂಗಳ ಮೊದಲೇ ಟೆಂಡರ್ ಪ್ರಕ್ರಿಯೆ ಮುಗಿಯುತ್ತಿತ್ತು. ಟೆಂಡರ್ ಪಡೆದವರು ಗಣೇಶ ನಿಮಜ್ಜನ ವ್ಯವಸ್ಥೆ, ವಿಲೇವಾರಿ ಮಾಡುತ್ತಿದ್ದರು. ಆದರೆ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ.

ಗಣೇಶ ಹಬ್ಬಕ್ಕೂ ಬಿಬಿಎಂಪಿ ಟೆಂಡರ್ ವಿಘ್ನ

ಈ ವಿಚಾರವಾಗಿ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಟೆಂಡರ್ ಫೈನಲ್ ಆಗದೆ ಇರೋದು ನಿಜ. ಇ- ಪ್ರಕ್ಯೂರ್​ಮೆಂಟ್ ನಲ್ಲಿ ತಾಂತ್ರಿಕ ತೊಂದರೆ ಆಗಿದೆ. ಕೆಆರ್ ಐಡಿಎಲ್ ಮೂಲಕ ಟೆಂಡರ್ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ಗಣೇಶ ನಿಮಜ್ಜನಕ್ಕೆ ಸಮಸ್ಯೆ ಆಗದಂತೆ ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೇಯರ್ ಗಂಗಾಂಬಿಕೆ ಮಾತನಾಡಿ, ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇವೆ. ಪ್ರತಿ ವರ್ಷದಂತೆಯೇ ಈ ವರ್ಷವೂ ಹಬ್ಬ ಜರುಗುತ್ತದೆ. ಯಾವುದೇ ಅಡೆತಡೆ ಆಗದಂತೆ ಪಕ್ಷದ ಪ್ರತಿನಿಧಿಗಳು ಹೋಗಿ ಮುಖ್ಯಮಂತ್ರಿ ಬಳಿ ಮಾತನಾಡುತ್ತೇವೆ ಎಂದು ಹೇಳಿದ್ರು.

ABOUT THE AUTHOR

...view details