ಕರ್ನಾಟಕ

karnataka

ವೀಲ್ ಚೇರ್​ ಇಲ್ಲದೇ ವಾಪಸಾದ ವಿಶೇಷ ಚೇತನ ವೋಟರ್​​: ಚೇರ್​ ವ್ಯವಸ್ಥೆಯಾದ ಬಳಿಕ ಮತದಾನ

By

Published : Nov 3, 2020, 11:31 AM IST

ಆರ್.ಆರ್​ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ವೀಲ್ ಚೇರ್​ ವ್ಯವಸ್ಥೆಯಿಲ್ಲದೇ ವಿಶೇಷ ಚೇತನ ಮತದಾರರೊಬ್ಬರು ವಾಪಸ್ ಹೋದ ಬಗ್ಗೆ ಸುದ್ದಿಯಾಗಿತ್ತು. ಮಾಧ್ಯಮಗಳ ವರದಿ ನೋಡಿದ ಅಧಿಕಾರಿಗಳು ಚೇರ್ ವ್ಯವಸ್ಥೆ ಮಾಡಿದ್ದಾರೆ.

BBMP officials privided Wheelchair for Specially abled voter
ವೀಲ್ ಚೇರ್​ ವ್ಯವಸ್ಥೆ ಮಾಡಿದ ಅಧಿಕಾರಿಗಳು

ಬೆಂಗಳೂರು:ಆರ್​.ಆರ್​ ನಗರದ ಮತಗಟ್ಟೆ 344 ರ ಮೌಂಟ್​ ಕಾರ್ಮೆಲ್ ಶಾಲೆಯಲ್ಲಿ ಮತದಾನ ಮಾಡಲು ಬಂದ ವೇಳೆ ವೀಲ್ ಚೇರ್​ ವ್ಯವಸ್ಥೆ ಇಲ್ಲದೇ ವಾಪಸ್​ ಹೋದ ಮತದಾರನಿಗೆ ಕೊನೆಗೂ ಅಧಿಕಾರಿಗಳು ಚೇರ್​ ವ್ಯವಸ್ಥೆ ಮಾಡಿದ್ದಾರೆ.

ಅಂಥೋನಿ ಜಾರ್ಜ್ ಎಂಬವರು ಮತ ಚಲಾಯಿಸಲು ಬಂದ ವೇಳೆ ಚೇರ್ ವ್ಯವಸ್ಥೆ ಇಲ್ಲದ ಕಾರಣ ವಾಪಸ್​ ಹೋಗಿದ್ದರು. ಅವರ ಪತ್ನಿ ಮಾತ್ರ ಮತ ಚಲಾಯಿಸಿದ್ದರು. ಈ ಕುರಿತು ಚುನಾವಣಾ ಅಧಿಕಾರಿಗಳನ್ನು ವಿಚಾರಿಸಿದರೆ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿ ಎಂದು ಹಾರಿಕೆ ಉತ್ತರ ನೀಡಿದ್ದರು. ಈ ಕುರಿತು ಮಾಧ್ಯಮಗಳು ಸುದ್ದಿ ಬಿತ್ತರ ಮಾಡಿದ್ದವು.

ವೀಲ್ ಚೇರ್​ ವ್ಯವಸ್ಥೆ ಮಾಡಿದ ಅಧಿಕಾರಿಗಳು

ಸುದ್ದಿ ಬಿತ್ತರವಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ವೀಲ್ ಚೇರ್​ ವ್ಯವಸ್ಥೆ ಮಾಡಿದ್ದರು. ಚೇರ್ ವ್ಯವಸ್ಥೆಯಾದ ವಿಷಯ ತಿಳಿದ ಅಂಥೋನಿ ಜಾರ್ಜ್ ಮತ್ತೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.

ABOUT THE AUTHOR

...view details