ಕರ್ನಾಟಕ

karnataka

By

Published : Jul 17, 2020, 12:52 PM IST

ETV Bharat / state

ಸಿಎಂ ಸಭೆಗೆ ಬಿಬಿಎಂಪಿ ಮೇಯರ್, ಕಮಿಷನರ್​ ಗೈರು

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನಡೆಸುತ್ತಿರುವ ಸಭೆಗೆ ಕೇಂದ್ರ ಸಚಿವರು, ಉಸ್ತುವಾರಿ ಸಚಿವರು, ಸಂಸದರು ಆಗಮಿಸಿದ್ದರೂ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಅ‌ನಿಲ್ ಕುಮಾರ್ ಗೈರು ಹಾಜರಾಗಿದ್ದಾರೆ. ಸಿಎಂ ಸಭೆಗೆ ಹಾಜರಾಗುವ ಬದಲು ಬಿಬಿಎಂಪಿಯಲ್ಲಿ ನಡೆದ ಆ್ಯಂಟಿಜೆನ್ ಟೆಸ್ಟ್​ಗೆ ಚಾಲನೆ ನೀಡಿ ಲಾಕ್​​​ಡೌನ್ ವಿಸ್ತರಣೆ ಮಾಡಬೇಕು ಎನ್ನುವ ಹೇಳಿಕೆ ನೀಡಿದ್ದಾರೆ.

BBMP mayor, commissioner absent for CM meeting
ಸಿಎಂ ಸಭೆಗೆ ಬಿಬಿಎಂಪಿ ಮೇಯರ್, ಕಮಿಷನರ್​ ಗೈರು

ಬೆಂಗಳೂರು :ಲಾಕ್​​​​ಡೌನ್ ಸ್ಥಿತಿಗತಿಗಳ ಕುರಿತು ಚರ್ಚಿಸಲುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದಿರುವ ವಲಯವಾರು ಉಸ್ತುವಾರಿಗಳ ಸಭೆಗೆ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರೇ ಗೈರು ಹಾಜರಾಗಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನಡೆಸುತ್ತಿರುವ ಸಭೆಗೆ ಕೇಂದ್ರ ಸಚಿವರು, ಉಸ್ತುವಾರಿ ಸಚಿವರು, ಸಂಸದರು ಆಗಮಿಸಿದ್ದರೂ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಅ‌ನಿಲ್ ಕುಮಾರ್ ಗೈರಾಗಿದ್ದಾರೆ. ಸಿಎಂ ಸಭೆಗೆ ಹಾಜರಾಗುವ ಬದಲು ಬಿಬಿಎಂಪಿಯಲ್ಲಿ ನಡೆದ ಆ್ಯಂಟಿಜೆನ್ ಟೆಸ್ಟ್​ಗೆ ಚಾಲನೆ ನೀಡಿ ಲಾಕ್​​ಡೌನ್ ವಿಸ್ತರಣೆ ಮಾಡಬೇಕು ಎನ್ನುವ ಹೇಳಿಕೆ ನೀಡಿದ್ದಾರೆ.

ಸಭೆಯಲ್ಲಿ ಸಿಎಂ ಮುಂದೆ ಅಭಿಪ್ರಾಯ ವ್ಯಕ್ತಪಡಿಸುವ ಎಲ್ಲ ಅವಕಾಶ ಇದ್ದರೂ ಗೈರು ಹಾಜರಾಗಿ, ಹೊರಗಡೆ ಲಾಕ್​​​​​​​ಡೌನ್ ವಿಸ್ತರಣೆ ಮಾಡಬೇಕು ಎನ್ನುವ ಹೇಳಿಕೆ ನೀಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ABOUT THE AUTHOR

...view details