ಕರ್ನಾಟಕ

karnataka

By

Published : Jul 31, 2020, 5:56 PM IST

ETV Bharat / state

ಕೆ ಆರ್ ಮಾರುಕಟ್ಟೆ- ಕಲಾಸಿಪಾಳ್ಯ ಸೀಲ್‌ಡೌನ್​ ಇನ್ನೂ ಒಂದು ತಿಂಗಳು ವಿಸ್ತರಣೆ

ಕಂಟೇನ್​ಮೆಂಟ್​ ವಲಯಗಳ ಲಾಕ್‌ಡೌನ್​ ಅವಧಿಯನ್ನು ಅಗಸ್ಟ್​ 31ರವರೆಗೆ ಮುಂದುವರೆಸುವಂತೆ ಕೇಂದ್ರ ಸರ್ಕಾರದ ಆದೇಶವಿರುವ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರ ತೆಗೆದುಕೊಂಡಿದೆ..

BBMP Extended Seal Down of Markets
ಮಾರುಕಟ್ಟೆಗಳ ಸೀಲ್​ ಡೌನ್​ ವಿಸ್ತರಿಸಿದ ಬಿಬಿಎಂಪಿ

ಬೆಂಗಳೂರು :ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆ ಜುಲೈ ತಿಂಗಳಲ್ಲಿ ಸೀಲ್‌ಡೌನ್ ಆಗಿರುವ ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ ಆರ್​ ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಇನ್ನೂ ಒಂದು ತಿಂಗಳು ತೆರೆಯದಿರಲು ಬಿಬಿಎಂಪಿ ನಿರ್ಧರಿಸಿದೆ.

ಮಾರ್ಚ್‌ ತಿಂಗಳಿನಿಂದ ಲಾಕ್‌ಡೌನ್​ ಪ್ರಾರಂಭವಾದ ಹಿನ್ನೆಲೆ ತೀವ್ರ ನಷ್ಟಕ್ಕೆ ಸಿಲುಕಿರುವ ವ್ಯಾಪಾರಿಗಳು ಜುಲೈ 31ಕ್ಕೆ ಮಾರುಕಟ್ಟೆ ಸೀಲ್‌ಡೌನ್​ ತೆರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಇನ್ನೂ ಒಂದು ತಿಂಗಳು ಮಾರುಕಟ್ಟೆ ಬಂದ್​ ಆಗುವುದರಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತೇವೆ ಎಂದು ಕಲಾಸಿಪಾಳ್ಯ ಮಾರುಕಟ್ಟೆಯ ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್​ ವಿ ಗೋಪಿ ತಿಳಿಸಿದ್ದಾರೆ.

ಬಿಬಿಎಂಪಿ ಆದೇಶ

ಕಂಟೇನ್​ಮೆಂಟ್​ ವಲಯಗಳ ಲಾಕ್‌ಡೌನ್​ ಅವಧಿಯನ್ನು ಅಗಸ್ಟ್​ 31ರವರೆಗೆ ಮುಂದುವರೆಸುವಂತೆ ಕೇಂದ್ರ ಸರ್ಕಾರದ ಆದೇಶವಿರುವ ಹಿನ್ನೆಲೆ ಬಿಬಿಎಂಪಿ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ, ಬೆಂಗಳೂರಿನ ಬಹುತೇಕ ಕಡೆ ಕಂಟೇನ್​ಮೆಂಟ್​ ವಲಯಗಳಿವೆ. ಮಾರುಕಟ್ಟೆಯಲ್ಲಿ ಮಾತ್ರ ಯಾಕೆ ಸೀಲ್​ಡೌನ್‌ ಮಾಡಲಾಗಿದೆ ಎಂದು ಗೋಪಿ ಪ್ರಶ್ನಿಸಿದ್ದು, ಈ ಕುರಿತು ಸಂಸದರು, ಸಿಎಂ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details