ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ರಾಜಕಾಲುವೆ ಮೇಲಿರುವ ಕಟ್ಟಡ ಹಾಗೂ ಇತರ ಜಾಗ ಒತ್ತುವರಿ ತುರ್ತಾಗಿ ತೆರವುಗೊಳಿಸಿಲ್ಲ. ಈ ಕ್ರಮಕ್ಕೆ ಮುಂದಾಗದೇ ಇರುವುದರಿಂದ ಬೆಂಗಳೂರು ಪೂರ್ವ ತಾಲೂಕು ಕೆಆರ್ಪುರಂ ತಹಶೀಲ್ದಾರ್ ಅಜಿತ್ ರೈ ಅವರನ್ನು ನಗರಾಭಿವೃದ್ಧಿ ಇಲಾಖೆ ಅಮಾನತು ಮಾಡಿ ಆದೇಶಿಸಿದೆ.
ಒತ್ತುವರಿದಾರರಿಗೆ ಸಹಕಾರ ಆರೋಪ: ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ರೈ ಅಮಾನತು - Tahashildar Ajit Rai suspended
ಒತ್ತುವರಿ ತೆರವು ಮಾಡದೇ, ಒತ್ತುವರಿದಾರರಿಗೆ ಕೋರ್ಟ್ನಿಂದ ಸ್ಟೇ ತರಲು ತಹಶೀಲ್ದಾರ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಕಾನೂನು ಉಲ್ಲಂಘನೆಯಾಗಿದ್ದು, ಹಾಗಾಗಿ ತಹಶೀಲ್ದಾರ್ ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.
![ಒತ್ತುವರಿದಾರರಿಗೆ ಸಹಕಾರ ಆರೋಪ: ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ರೈ ಅಮಾನತು Tahashildar Ajit Rai](https://etvbharatimages.akamaized.net/etvbharat/prod-images/768-512-17021045-thumbnail-3x2-binjpg.jpg)
ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ರೈ ಅಮಾನತು
ಮಹದೇವಪುರ ಕ್ಷೇತ್ರದ ಸರ್ಜಾಪುರ ಬಳಿಯ ರೈನ್ ಬೋ ಲೇಔಟ್ ಸೇರಿದಂತೆ ಹಲವಡೆ ರಾಜಕಾಲುವೆ ಒತ್ತುವರಿ ಮಾಡಲಾಗಿತ್ತು. ಒತ್ತುವರಿ ತೆರವು ಮಾಡದೇ, ಒತ್ತುವರಿದಾರರಿಗೆ ಕೋರ್ಟ್ನಿಂದ ಸ್ಟೇ ತರಲು ತಹಶೀಲ್ದಾರ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಕಾನೂನು ಉಲ್ಲಂಘನೆಯಾಗಿದ್ದು, ಹಾಗಾಗಿ ತಹಶೀಲ್ದಾರ್ ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಜತೆಗೆ ಇಲಾಖೆಯ ವಿಚಾರಣೆಗೂ ಆದೇಶಿಸಲಾಗಿದೆ.
ಇದನ್ನೂ ಓದಿ:ಟ್ರಾಫಿಕ್, ಆರ್ಟಿಒ ಅಧಿಕಾರಿಗಳ ಜಂಟಿ ಕಾರ್ಯಾಚರಣೆ: 35 ಆಟೋಗಳು ಜಪ್ತಿ