ಆನೇಕಲ್:ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಪ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಈಗಾಗಲೇ ಮೂರು ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಜಾಮೀನು ಮಂಜೂರಾ ಅಥವಾ ನಿರಾಕರಣೆಯಾಗುತ್ತೆಂಬ ತೀವ್ರ ಕುತೂಹಲ ರಾಜ್ಯದ ಜನರಲ್ಲಿ ಮೂಡಿದೆ. ವಿಶೇಷ ಪ್ರಕರಣವೆಂದು ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬಂದಿದ್ದು, ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಅಂಗೂರ್ ಜಾಮೀನಿಗಾಗಿ ಕಾಯುತ್ತಿದ್ದಾರೆ.
2019 ಅಕ್ಟೋಬರ್ 15 ಅಲಯನ್ಸ್ ಯೂನಿವರ್ಸಿಟಿ ಮೊದಲ ಉಪಕುಲಪತಿಯಾಗಿದ್ದ ಅಯ್ಯಪ್ಪ ದೊರೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ತನಿಖೆ ವೇಳೆ ಅಯ್ಯಪ್ಪ ದೊರೆ ಕೊಲೆಗೆ ಸುಪಾರಿ ನೀಡಿರುವ ವಿಚಾರ ಬಯಲಾಗಿತ್ತು. 2019ರಲ್ಲಿ ಅಲಯನ್ಸ್ ಕುಲಪತಿಯಾಗಿದ್ದ ಸುಧೀರ್ ಅಂಗೂರ್ ಸುಪಾರಿ ನೀಡಿದ್ದಾರೆಂದು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದರು.