ಕರ್ನಾಟಕ

karnataka

ಸಿಲಿಕಾನ್​​​​ ಸಿಟಿಯ ಪೊಲೀಸ್​​​ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ

By

Published : Oct 7, 2019, 4:19 PM IST

ಸಿಲಿಕಾನ್​ ಸಿಟಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ಪ್ರತಿದಿನ ಸಮವಸ್ತ್ರದಲ್ಲಿ ಬರುತ್ತಿದ್ದ ಪೊಲೀಸರು, ಇಂದು ಬಣ್ಣ-ಬಣ್ಣದ ಬಟ್ಟೆ ತೊಟ್ಟು ಠಾಣೆಗೆ ಆಗಮಿಸಿದ್ದರು.

ಸಿಲಿಕಾನ್​ ಸಿಟಿಯ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ

ಬೆಂಗಳೂರು: ಸಿಲಿಕಾನ್​ ಸಿಟಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ಪ್ರತಿದಿನ ಸಮವಸ್ತ್ರದಲ್ಲಿ ಬರುತ್ತಿದ್ದ ಪೊಲೀಸರು, ಇಂದು ಬಣ್ಣ-ಬಣ್ಣದ ಬಟ್ಟೆ ತೊಟ್ಟು ಠಾಣೆಗೆ ಆಗಮಿಸಿದ್ದರು.

ಸಿಲಿಕಾನ್​ ಸಿಟಿಯ ಪೊಲೀಸ್​ ಠಾಣೆಗಳಲ್ಲಿ ಆಯುಧ ಪೂಜೆಯ ಸಂಭ್ರಮ

ಯಶವಂತಪುರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಮಹಮದ್ ಮುಕಾರಮ್ ಠಾಣೆಯಲ್ಲಿ ಆಯುಧ ಪೂಜೆ‌ ಮಾಡಿದರು. ಠಾಣೆಯನ್ನು ಹೂಗಳಿಂದ ಸಿಂಗರಿಸಿ, ವಾಹನಗಳಿಗೆ ಹೂವು ಹಾಗೂ ಬಾಳೆ ದಿಂಡಿನಿಂದ ಅಲಂಕಾರ ಮಾಡಲಾಗಿತ್ತು. ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಕೂಡ ಸಾಥ್ ನೀಡಿ ಪೂಜಾ ಕಾರ್ಯ ನೆರವೇರಿಸದರು.

ಇದೇ ವೇಳೆ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಇಂದು ಮೈಸೂರು ಕರ್ನಾಟಕ ಮಾತ್ರವಲ್ಲ ಪೊಲೀಸ್ ಇಲಾಖೆಯಲ್ಲಿ ಬಹಳ ಸಂಭ್ರಮದ ದಿನ. ಇಲಾಖೆಯ ಆಯುಧಗಳನ್ನು ಸ್ವಚ್ಛ ಮಾಡಿ ಪೂಜೆ ಮಾಡುತ್ತೇವೆ. ಜಾತಿ, ಧರ್ಮದ ಎಲ್ಲೆ ಮೀರಿ ಶತಮಾನದಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಈ ದಸರಾ ಹಬ್ಬ ಸಂಭ್ರಮದಲ್ಲಿ ಸಮಾಜದ ಎಲ್ಲಾ ಕೆಟ್ಟ ಶಕ್ತಿ ತೊಡೆದು ಹಾಕಿ ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಕೆಲಸ‌ ಮಾಡೋಣ ಎಂದು ಕರೆ ನೀಡಿದರು.

ABOUT THE AUTHOR

...view details