ಕರ್ನಾಟಕ

karnataka

ETV Bharat / state

ಔರಾದ್ಕರ್ ವರದಿಯಲ್ಲಿ ಲೋಪದೋಷ: ಸಿಎಂಗೆ ಪತ್ರ ಬರೆದ ಪೊಲೀಸ್ ಪೇದೆ - auradkars report loophole latest news

ರಾಜ್ಯ ಪೊಲೀಸರ ಅನೇಕ ವರ್ಷಗಳ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧಿಸಿದ ಔರಾದ್ಕರ್ ವರದಿಯಲ್ಲಿರುವ ಲೋಪದೋಷಗಳ ಬಗ್ಗೆ ಪೊಲೀಸ್ ಪೇದೆಯೊಬ್ಬರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

Auradkar's report loopholes: PC written letter to CM
ಔರದ್ಕರ್ ವರದಿಯ ಲೋಪದೋಷ:  ಸಿಎಂಗೆ ಪತ್ರ ಬರೆದ ಪೇದೆ

By

Published : Dec 15, 2019, 3:27 PM IST

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಪೇದೆ ಮನು ಎಂಬುವರು ತಮಗೆ ಹಾಗೂ ಇತರ ಸಿಬ್ಬಂದಿಗೆ ಔರಾದ್ಕರ್ ವರದಿ ಲೋಪದೋಷದಿಂದಾಗಿ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಔರಾದ್ಕರ್ ವರದಿಯ ಲೋಪದೋಷ: ಸಿಎಂಗೆ ಪತ್ರ ಬರೆದ ಪೊಲೀಸ್ ಪೇದೆ

ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಔರಾದ್ಕರ್ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ವರದಿ ಇತ್ತೀಚೆಗೆ ಜಾರಿಯಾಗಿತ್ತು. ಆದ್ರೆ, ವರದಿಯಲ್ಲಿ ಲೋಪದೋಷಗಳಿವೆ ಎಂದು ಸಾವಿರಾರು ಪೊಲೀಸ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದರು.‌ಈ ಸಂಬಂಧ ಸರ್ಕಾರದ ವಿರುದ್ಧ ಸೇವಾ ಹಿರಿತನವಿರುವ ಪೊಲೀಸ್ ಸಿಬ್ಬಂದಿ‌‌ ರೊಚ್ಚಿಗೆದ್ದಿದ್ದಾರೆ. ವರದಿಯಲ್ಲಿ ಲೋಪದೋಷವಿದೆಯಾ? ಅಥವಾ ಸರ್ಕಾರದ ಆದೇಶದಲ್ಲಿ ದೋಷಗಳಿವೆಯೇ? ಪೊಲೀಸರ ಸೇವಾ ಹಿರಿತನ ನೋಡದೆ ಮೂಲ ವೇತನ ಪರಿಷ್ಕರಿಸಿದ್ದು ಎಷ್ಟು ಸರಿ? ಆದಷ್ಟು ಬೇಗ ಸರ್ಕಾರ ವರದಿಯ ಲೋಪದೋಷ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೇವಲ ಭರವಸೆ ಕೊಟ್ಟು ಪೊಲೀಸರ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ಕುಂದಿಸುತ್ತಿರುವ ಬಗ್ಗೆ ಆದಷ್ಟು ಬೇಗ ಗಮನಹರಿಸಿ ಎಂದು ಪೊಲೀಸ್ ಪೇದೆ ಮನು ಪತ್ರದ ಮುಖೇನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details