ಕರ್ನಾಟಕ

karnataka

ಬ್ಯಾಂಕಿಂಗ್ ವಂಚನೆ ಪ್ರಕರಣ... ಯಾವ ಯಾವ ಬ್ಯಾಂಕ್​ಗಳ ಮೇಲೆ ಸಿಬಿಐ ದಾಳಿ?

By

Published : Nov 5, 2019, 5:24 PM IST

ಸಿಬಿಐ ಅಧಿಕಾರಿಗಳ ತಂಡ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿರುವ 169ಕ್ಕೂ ಹೆಚ್ಚು ಬ್ಯಾಂಕುಗಳ ಮೇಲೆ ದಾಳಿ ನಡೆಸಿ ಬ್ಯಾಂಕ್​ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬ್ಯಾಂಕಿಂಗ್ ವಂಚನೆ ಪ್ರಕರಣ.....ಸಿಬಿಐ ಅಧಿಕಾರಿಗಳಿಂದ ವಿವಿಧ ಬ್ಯಾಂಕ್ ಗಳ ಮೇಲೆ ದಾಳಿ !

ಬೆಂಗಳೂರು:ಬ್ಯಾಂಕಿಂಗ್​ ಹಗರಣ ಆರೋಪ ಹಿನ್ನೆಲೆಯಲ್ಲಿ, ಸಿಬಿಐ ಅಧಿಕಾರಿಗಳ ತಂಡ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿರುವ 169ಕ್ಕೂ ಹೆಚ್ಚು ಬ್ಯಾಂಕುಗಳ ಮೇಲೆ ದಾಳಿ ನಡೆಸಿ ಬ್ಯಾಂಕ್​ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸುಮಾರು 7000 ಕೋಟಿ.ರೂ ಬ್ಯಾಂಕಿಂಗ್ ಹಗರಣ ನಡೆದಿರುವ ಆರೋಪದ ಮೇಲೆ ದೆಹಲಿ, ತ್ರಿಪುರಾ, ಗುಜರಾತ್, ಕರ್ನಾಟಕಗಳಲ್ಲಿರುವ ಇಂಡಿಯನ್ ಓವರ್​ಸಿಸ್ ಬ್ಯಾಂಕ್, ಎಸ್ ಬಿಐ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಕೆನರಾ ಬ್ಯಾಂಕ್, ದೇನಾಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೇರಿದಂತೆ‌ ನಾನಾ ಬ್ಯಾಂಕ್​ಗಳ‌ ಮೇಲೆ ದಾಳಿ ನಡೆಸಲಾಗಿದೆಯೆಂದು ಸಿಬಿಐ ಪ್ರಕಟಿಸಿದೆ.

ಇನ್ನು ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದು, ಬ್ಯಾಂಕುಗಳ ವ್ಯವಾಹರದ ‌ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.

ABOUT THE AUTHOR

...view details