ಕರ್ನಾಟಕ

karnataka

By

Published : Aug 19, 2020, 7:27 AM IST

Updated : Aug 19, 2020, 8:29 AM IST

ETV Bharat / state

ಬೆಂಗಳೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಖಾಸಗಿ ಕಂಪನಿ ‌ಮ್ಯಾನೇಜರ್​​​ ಹತ್ಯೆ!

ಬೆಂಗಳೂರು ನಗರದ ಆರ್​ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯ ಲಾರಿ ಸ್ಟ್ಯಾಂಡ್ ಬಳಿ ತಡರಾತ್ರಿ ಖಾಸಗಿ ಕಂಪನಿ ಮ್ಯಾನೇಜರ್ ಒಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ‌ ಮಾಡಿರುವ ಘಟನೆ ನಡೆದಿದೆ.

Assassination of private company manager: DCP visits the place
ಮಾರಕಾಸ್ತ್ರಗಳಿಂದ ಕೊಚ್ಚಿ ಖಾಸಗಿ ಕಂಪೆನಿ ‌ಮ್ಯಾನೇಜರ್ ಹತ್ಯೆ: ಘಟನಾ ಸ್ಥಳಕ್ಕೆ ಡಿಸಿಪಿ ಭೇಟಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಖಾಸಗಿ ಕಂಪನಿ ಮ್ಯಾನೇಜರ್​ವೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ‌ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಖಾಸಗಿ ಕಂಪನಿ ‌ಮ್ಯಾನೇಜರ್​​​ ಹತ್ಯೆ!

ಪ್ರಶಾಂತ್(29) ಕೊಲೆಯಾದ ವ್ಯಕ್ತಿ. ನಗರದ ಆರ್​ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯ ಲಾರಿ ಸ್ಟ್ಯಾಂಡ್ ಬಳಿ ಘಟನೆ ನಡೆದಿದೆ. ವ್ಯಕ್ತಿಯು ತಡರಾತ್ರಿ ಕೆಲಸ‌ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಏಕಾ‌ಏಕಿ ದುಷ್ಕರ್ಮಿಗಳು ಹಲ್ಲೆ‌ನಡೆಸಿದ್ದಾರೆ. ನೈಟ್ ಬೀಟ್ ಪೊಲೀಸರಿ್ಗೆ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದಾಗ ತೀವ್ರವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಅದಾಗಲೇ ಸ್ಥಳದಲ್ಲೇ ಸಾವನ್ನಪ್ಪಿದ್ದ.

ವಿಚಾರ ತಿಳಿದು ಉತ್ತರ ವಿಭಾಗ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮಾತನಾಡಿದ ಅವರು, ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

Last Updated : Aug 19, 2020, 8:29 AM IST

ABOUT THE AUTHOR

...view details