ಕರ್ನಾಟಕ

karnataka

ETV Bharat / state

9.79 ಲಕ್ಷ ರೂ. ಮೌಲ್ಯದ ಗಂಧದ ಮರದ ತುಂಡುಗಳು ವಶ: ಆರೋಪಿಗಳು ಅಂದರ್​! - ಗಂಧದ ಮರ ಕಳ್ಳತನ

ಚನ್ನಸಂದ್ರ ಕಲಾ ಫಾರಂನಲ್ಲಿದ್ದ 2 ಗಂಧದ ಮರಗಳನ್ನು ಕದ್ದ ಆರೋಪದಡಿ ರಾಜೇಶ್ ಲೋಕೇಶ್, ಗೋವಿಂದ್ ರಾಜು ಎನ್ನುವವರನ್ನು ಬಂಧಿಸಲಾಗಿದೆ.

Arrest of thieves who stole sandalwood at bangalore
ಗಂಧದ ಮರ ಕದ್ದ ಖದೀಮರು ಅಂದರ್​; 9.79 ಲಕ್ಷ ರೂ. ಮೌಲ್ಯದ ಗಂಧ ವಶ

By

Published : Jan 8, 2021, 10:48 AM IST

ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಗಂಧದ ಮರಗಳನ್ನು ಕಡಿದು ಕದ್ದೊಯ್ದಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಚನ್ನಸಂದ್ರ ಕಲಾ ಫಾರಂನಲ್ಲಿದ್ದ 2 ಗಂಧದ ಮರಗಳನ್ನು ಕದ್ದ ಆರೋಪದಡಿ ರಾಜೇಶ್ ಲೋಕೇಶ್, ಗೋವಿಂದ್ ರಾಜು ಎನ್ನುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 9.79 ಲಕ್ಷ ರೂ. ಬೆಲೆಬಾಳುವ ಸುಮಾರು 178 ಕೆಜಿ ತೂಕದ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ:ಬೆಳ್ತಂಗಡಿ: ಕುಡಿದ ಅಮಲಿನಲ್ಲಿ ಪತ್ನಿಕೊಂದ ಪತಿ: ಆರೋಪ

ಇನ್ನೂ ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ಕಂಬಿ, ಮಚ್ಚು, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details