ಕರ್ನಾಟಕ

karnataka

ಹವಾ ಕ್ರಿಯೇಟ್​ ಮಾಡಲು ಇಂತಹ ಕೆಲಸ ಮಾಡಿದ್ರಂತೆ ಈ ಭೂಪರು!

By

Published : Nov 8, 2019, 1:28 PM IST

ಬೆ.ಗಳೂರಿನಲ್ಲಿ ನಡೆದ ಕಾರು ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಹೆಸರು ಮಾಡಬಹುದು ಅನ್ನೋ ಭ್ರಮೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ

20 ಕ್ಕೂ ಹೆಚ್ಚು ಕಾರುಗಳ ಗ್ಲಾಸ್​ ಜಖಂ

ಬೆಂಗಳೂರು: ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಾಹನ , ಕಾರು ಜಖಂ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ನೀತಿನ್ ,ಯಶವಂತ, ಆಶ್ರಯ್, ಬಾಲಾಜಿ, ಕಿರಣ್ ರೆಡ್ಡಿ , ಮುತ್ತು, ಚರಣ್ ರಾಜ್ ಬಂಧಿತರು. ಬಂಧಿತರ ಪೈಕಿ ಕಿರಣ್ ರೆಡ್ಡಿ ವಿಜಯನಗರ ರೌಡಿಶೀಟರ್ ಆಗಿದ್ದಾನೆ. ಹೀಗಾಗಿ ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಇವನು ತನ್ನ ಸಹಚರರ ಜೊತೆ ಗೂಡಿ ಕಾರಿನ ಗ್ಲಾಸ್ ಪುಡಿ ಮಾಡಿದ್ದಾನೆ ಎನ್ನಲಾಗಿದೆ.

20 ಕ್ಕೂ ಹೆಚ್ಚು ಕಾರುಗಳ ಗ್ಲಾಸ್​ ಜಖಂ

ಇದಲ್ಲದೆ, ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಹೆಸರು ಮಾಡಬಹುದು ಅನ್ನೋ ಭ್ರಮೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮೂರರಿಂದ ನಾಲ್ಕು ಜನ ತಲೆಮರೆಸಿಕೊಂಡಿದ್ದು, ಅವರಿಗೆ ಹುಡುಕಾಟ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯನಗರದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ 20ಕ್ಕೂ ಅಧಿಕ ಕಾರುಗಳ ಗ್ಲಾಸ್​​ಗಳನ್ನು ನಿನ್ನೆ ತಡರಾತ್ರಿ ಜಖಂ ಮಾಡಿದ್ದರು.

ABOUT THE AUTHOR

...view details