ಕರ್ನಾಟಕ

karnataka

By

Published : May 17, 2020, 2:19 PM IST

ETV Bharat / state

ಎಣ್ಣೆಪಾರ್ಟಿಯಲ್ಲಿ ಹಫ್ತಾ ವಿಚಾರವಾಗಿ ಗಲಾಟೆ: ಗುರುವಿಗೇ ಮುಹೂರ್ತ ಇಟ್ಟ ಶಿಷ್ಯಂದಿರು

ಬ್ಯಾಟರಾಯನಪುರದ ಬಳಿ ಶಿಷ್ಯಂದಿರು ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದರು. ಕಳೆದ ವಾರ ಅಶೊಕ್ ತನ್ನ ಶಿಷ್ಯಂದಿರ ಬಳಿ ಹಫ್ತಾ ವಿಚಾರವಾಗಿ ಗಲಾಟೆ ಮಾಡಿದ್ದಾನೆ. ಇದರಿಂದ ಕೆರಳಿದ ಶಿಷ್ಯಂದಿರು ಬ್ಯಾಟರಾಯನಪುರದ ಮಾರುತಿ ನಗರದಲ್ಲಿ ಅಶೊಕ್​ನನ್ನು ಕೊಚ್ಚಿ ಕೊಂದಿದ್ದಾರೆ.

Arrest of accused who killed man in Bagalore
: ಗುರುವನ್ನು ಕೊಲೆ ಮಾಡಿದ್ದವರ ಬಂಧನ

ಬೆಂಗಳೂರು: ತಮ್ಮಿಂದಲೇ ಹಫ್ತಾ ವಸೂಲಿ ಮಾಡುತ್ತಿದ್ದ ರೌಡಿಶೀಟರ್​​ಅನ್ನು ಶಿಷ್ಯಂದಿರೇ ಸೇರಿ ಕೊಲೆ ಮಾಡಿದ್ದು, ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಅಂದಾನಿ ,ಚೇತನ್ ,ಅಭಿಷೇಕ್ ಅಭಿ‌,ಯಶ್ವಂತ್, ರಾಜು, ಕೌಶಿಕ್ ಬಂಧಿತ ಆರೋಪಿಗಳು. ಲಾಕ್​ಡೌನ್​ ನಡುವೆ ಅಶೋಕ್ ಹಾಗೂ ಆತನ ಶಿಷ್ಯಂದಿರು ಬ್ಯಾಟರಾಯನಪುರದ ಬಳಿ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದರು. ಕಳೆದ ವಾರ ಅಶೊಕ್ ತನ್ನ ಶಿಷ್ಯಂದಿರ ಬಳಿ ಹಫ್ತಾ ವಿಚಾರವಾಗಿ ಗಲಾಟೆ ಮಾಡಿದ್ದಾನೆ. ಇದರಿಂದ ಕೆರಳಿದ ಶಿಷ್ಯಂದಿರು ಬ್ಯಾಟರಾಯನಪುರದ ಮಾರುತಿ ನಗರದಲ್ಲಿ ಅಶೊಕ್​ನನ್ನು ಕೊಚ್ಚಿ ಕೊಂದಿದ್ದಾರೆ.

ಅಶೋಕ್ ಮೇಲೆ ಪಶ್ಚಿಮ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಪಟ್ಟಿ ಇದ್ದು, ಕೊಲೆ, ದರೋಡೆ, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ಜೊತೆ ಇದ್ದ ಶಿಷ್ಯದಿಂರ ಮೇಲೆ ಕೂಡ ಹಲವಾರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ABOUT THE AUTHOR

...view details