ಕರ್ನಾಟಕ

karnataka

ಕೊರೊನಾಗೆ ಮತ್ತೊಬ್ಬ ವಾರಿಯರ್ ಬಲಿ: ಸಂಜಯ್ ಗಾಂಧಿ ಆಸ್ಪತ್ರೆ ಸೀಲ್​​ಡೌನ್

By

Published : Jul 4, 2020, 3:14 PM IST

ಬೆಂಗಳೂರಿನ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೊರೊನಾ ವಾರಿಯರ್​ ಇಂದು ಮೃತಪಟ್ಟಿದ್ದಾರೆ. ಇನ್ನು ನಗರದ ಸಂಜಯ್​​ ಗಾಂಧಿ ಆಸ್ಪತ್ರೆಯನ್ನೂ ಸೀಲ್​ಡೌನ್​ ಮಾಡಲಾಗಿದೆ.

Sanjay Gandhi hospital seal down
ಸಂಜಯ್ ಗಾಂಧಿ ಆಸ್ಪತ್ರೆ

ಬೆಂಗಳೂರು: ಕೊರೊನಾ ಹೆಮ್ಮಾರಿಗೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನರ್ಸ್​ ಒಬ್ಬರು ಇಂದು ಮೃತಪಟ್ಟಿದ್ದು, ಇದರೊಂದಿಗೆ ಸಂಜಯ್​ ಗಾಂಧಿ ಆಸ್ಪತ್ರೆಯನ್ನು ಸೀಲ್​ಡೌನ್​ ಮಾಡಲಾಗಿದೆ.

ನಗರದ ಸಂತೋಷ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್, ಲಿಂಗರಾಜಪುರ ನಿವಾಸಿಯಾಗಿದ್ದು, ಇಂದು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ‌ಇದರೊಂದಿಗೆ ನಗರದ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿನ ಸಿಬ್ಬಂದಿಗೂ ಕೊರೊನಾ ತಟ್ಟಿದ್ದು, ಸುಮಾರು 11 ಸಿಬ್ಬಂದಿಗಳಿಗೆ ಸೋಂಕು ಪತ್ತೆಯಾಗಿದೆ.

ಒಬ್ಬ ರೋಗಿಯಿಂದ 11 ಜನರಿಗೆ ಸೋಂಕು ತಗುಲಿದ್ದು, ಟೆಕ್ನಿಷಿಯನ್ ನರ್ಸ್ ಹಾಗೂ ವೈದ್ಯರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಇಂದಿನಿಂದ ಮುಂದಿನ ಗುರುವಾರದವರೆಗೆ ಆಸ್ಪತ್ರೆ ಸೀಲ್​​​ಡೌನ್ ಮಾಡಲಾಗಿದೆ.‌ ಹೊರ ರೋಗಿಗಳ ಚಿಕಿತ್ಸೆ ಇರುವುದಿಲ್ಲ ಕೇವಲ ತುರ್ತು ಸೇವೆ ಮಾತ್ರ ಲಭ್ಯವಿರಲಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details