ಕರ್ನಾಟಕ

karnataka

ETV Bharat / state

ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ... ಗಣೇಶ್ ಪರ​ ವಕೀಲರಿಂದ ಹೈಕೋರ್ಟ್​​ಗೆ ಅರ್ಜಿ - undefined

ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಪರ ವಕೀಲರು ಹೈಕೋರ್ಟ್​​ಗೆ ಇಂದು ಅರ್ಜಿ ಸಲ್ಲಿಸಿದ್ದು, ಪರಪ್ಪನ ಅಗ್ರಹಾರದಲ್ಲಿರುವ ಗಣೇಶ್​ಗೆ ಹೈಕೋರ್ಟ್ ಬೇಲ್​ ನೀಡುತ್ತಾ ಅಥವಾ ಜೈಲೇ ಗತಿನಾ ಅನ್ನೋದನ್ನು ಕಾದು ನೋಡಬೇಕಿದೆ.

ಶಾಸಕ ಆನಂದ್ ಸಿಂಗ್

By

Published : Mar 29, 2019, 1:05 PM IST

Updated : Mar 29, 2019, 7:06 PM IST

ಬೆಂಗಳೂರು:ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಪರ ವಕೀಲರು ಹೈಕೋರ್ಟ್​​ಗೆ ಇಂದು ಅರ್ಜಿ ಸಲ್ಲಿಸಿದ್ದಾರೆ.

ಗಣೇಶ್ ಬಂಧನವಾಗಿ ಒಂದು ವಾರದಬಳಿಕ ಅವರ ಪರ ವಕೀಲರಾದ ಹನುಮಂತರಾಯಪ್ಪ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ‌ಹಾಕಿದ್ದರು. ಮಾ.25ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಮಚಂದ್ರ ಹುದ್ದಾರ್ಅವರು ಜಾಮೀನು ಅರ್ಜಿಯನ್ನು ವಜಾ ‌ಮಾಡಿದ್ದರು.

ಇದೀಗ ಕಂಪ್ಲಿ ಗಣೇಶ್​ ಅವರು ಹೈಕೋರ್ಟ್​ನಿಂದಲೇ ಜಾಮೀನು ಪಡಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅವರ ಪರ ವಕೀಲರು ಹೈಕೋರ್ಟ್​ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇನ್ನು ನಡೆಯಬೇಕಿದ್ದು, ಪರಪ್ಪನ ಅಗ್ರಹಾರದಲ್ಲಿರುವ ಗಣೇಶ್​ಗೆ ಹೈಕೋರ್ಟ್ ಬೇಲ್​ ನೀಡುತ್ತಾ ಅಥವಾ ಜೈಲೇ ಗತಿನಾ ಅನ್ನೋದನ್ನು ಕಾದು ನೋಡಬೇಕಿದೆ.

Last Updated : Mar 29, 2019, 7:06 PM IST

For All Latest Updates

TAGGED:

ABOUT THE AUTHOR

...view details