ಕರ್ನಾಟಕ

karnataka

ETV Bharat / state

ಶಿಷ್ಟಾಚಾರ ಉಲ್ಲಂಘನೆ ಆರೋಪ.. ಶಾಸಕರು-ಜಿಪಂ ಸದಸ್ಯರ ನಡುವೆ ಮಾತಿನ ಚಕಮಕಿ! - clash between congress mla and bjp leader in anekal

ಶೆಟ್ಟಿಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಮುಗಿಸುವ ಸಂದರ್ಭದಲ್ಲಿ ಹಾಜರಿದ್ದ ಜಿಪಂ ಸದಸ್ಯ ರಾಮಚಂದ್ರ, ತಾಪಂ ಸದಸ್ಯರು, ಕಾಂಗ್ರೆಸ್ ಮುಖಂಡರ ಮೇಲೆ ಶಿಷ್ಟಾಚಾರ ಉಲ್ಲಂಘನೆಯ ಕುರಿತು ಪ್ರಶ್ನೆಗಳ ಸುರಿಮಳೆ ಸುರಿಸಿದರು..

allegation-of-violation-of-etiquette-in-anekal
ಶಾಸಕ-ಜಿಪಂ ಸದಸ್ಯರ ನಡುವೆ ಮಾತಿನ ಚಕಮಕಿ

By

Published : Feb 24, 2021, 4:40 PM IST

ಆನೇಕಲ್ :ಸರ್ಕಾರಿ ಯೋಜನೆಗಳನ್ನ ಅನುಷ್ಠಾನಗೊಳಿಸುವಲ್ಲಿ ಅಧಿಕಾರಾರೂಢ ಪಕ್ಷ ತನ್ನ ಸಾಧನೆ ಎಂದು ತೋರುವ ಫ್ಲೆಕ್ಸ್ ಹಾಕಿದ್ದ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಜಿಪಂ ಸದಸ್ಯ ಬಿಜೆಪಿಯ ಬಂಡಾಪುರ ರಾಮಚಂದ್ರ ಅವರು ಶಾಸಕ ಬಿ. ಶಿವಣ್ಣರಿಗೆ ಮುಖಾಮುಖಿ ಪ್ರಶ್ನೆ ಹಾಕಿದರು. ಹೀಗಾಗಿ, ಮುಖಂಡರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಶಾಸಕ-ಜಿಪಂ ಸದಸ್ಯರ ನಡುವೆ ಮಾತಿನ ಚಕಮಕಿ..

ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಮುಗಿಸುವ ಸಂದರ್ಭದಲ್ಲಿ ಹಾಜರಿದ್ದ ಜಿಪಂ ಸದಸ್ಯ ರಾಮಚಂದ್ರ, ತಾಪಂ ಸದಸ್ಯರು, ಕಾಂಗ್ರೆಸ್ ಮುಖಂಡರ ಮೇಲೆ ಶಿಷ್ಟಾಚಾರ ಉಲ್ಲಂಘನೆಯ ಕುರಿತು ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಓದಿ:ದೂಧ್ ಸಾಗರ್ ಜಲಪಾತ, ಬ್ರಿಗಾಂಜಾ ಘಾಟ್ ಸೊಬಗನ್ನು ಇನ್ಮುಂದೆ ರೈಲಿನಲ್ಲಿ ಕುಳಿತೇ ಕಣ್ತುಂಬಿಕೊಳ್ಳಬಹುದು

ಪ್ರತ್ಯುತ್ತರವಾಗಿ ಉತ್ತರಿಸಿದ ಶಾಸಕ ಬಿ. ಶಿವಣ್ಣ, ಸರ್ಜಾಪುರದಲ್ಲಿ ಮಾಜಿ ಜಿಪಂ ಅಧ್ಯಕ್ಷ ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಬಂದಿದ್ದಾಗ ಸರ್ಕಾರಿ ಯೋಜನೆ ಕಾಮಗಾರಿ ಫ್ಲೆಕ್ಸ್ನಲ್ಲಿ ಬಿಜೆಪಿಯ ಪಕ್ಷದ್ದೇ ದರ್ಬಾರಿತ್ತು. ಆಗ ಎಲ್ಲಿತ್ತು ಈ ಶಿಷ್ಟಾಚಾರ? ಈಗ ಅಭಿಮಾನಿಗಳು ಫ್ಲೆಕ್ಸ್​ ಹಾಕಿಕೊಂಡಿದ್ದಾರೆ. ಇಷ್ಟವಿಲ್ಲದಿದ್ದರೆ ಬಿಡಿ ಎಂದು ಅಂತ್ಯ ಹಾಡಿದರು.

ABOUT THE AUTHOR

...view details