ಕರ್ನಾಟಕ

karnataka

ETV Bharat / state

ಶೀಘ್ರ ಸಚಿವ ಸಂಪುಟ ಪುನಾರಚನೆ: ಸಿಎಂ ಘೋಷಣೆ - undefined

ಕಾಂಗ್ರೆಸ್​ ಪಕ್ಷದ ಮಾದರಿಯಲ್ಲಿಯೇ ಜೆಡಿಎಸ್ ಪಕ್ಷದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ.

ಸಚಿವ ಸ್ಥಾನಕ್ಕೆ ಜೆಡಿಎಸ್ ಸಚಿವರಿಂದಲೂ ಸಾಮೂಹಿಕ ರಾಜೀನಾಮೆ

By

Published : Jul 8, 2019, 3:28 PM IST

Updated : Jul 8, 2019, 3:35 PM IST

ಬೆಂಗಳೂರು: ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡಿದಂತೆ ಜೆಡಿಎಸ್​ನ ಎಲ್ಲ ಸಚಿವರೂ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಡಿಸಿಎಂ ಪರಮೇಶ್ವರ್ ಅವರ ಮನೆಯಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಉಪಹಾರ ಕೂಟದಲ್ಲಿ ಸಭೆ ನಡೆಸಿ ಸರ್ಕಾರವನ್ನು ಸಂಕಷ್ಟದಿಂದ ಪಾರು ಮಾಡಲು ಸಾಮೂಹಿಕವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್​ನ ಮಾದರಿಯಲ್ಲಿಯೇ ಜೆಡಿಎಸ್ ಪಕ್ಷದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ.

ಸಚಿವ ಸಂಪುಟ ವನ್ನು ಶೀಘ್ರವೇ ಪುನರ್​ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

Last Updated : Jul 8, 2019, 3:35 PM IST

For All Latest Updates

TAGGED:

ABOUT THE AUTHOR

...view details