ಕರ್ನಾಟಕ

karnataka

ETV Bharat / state

ಅಕ್ಷಯ ಗೋಲ್ಡ್ ಕಂಪೆನಿ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಖತಾರ್ನಾಕ್ ಕಳ್ಳ ಅಂದರ್ - undefined

ಚಿನ್ನ ಕದ್ದು ಅದನ್ನು ಮಾರುವ ವೇಳೆ ಕಳ್ಳನೊಬ್ಬ ಚಿನ್ನದಂಗಡಿ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದು, ಸದ್ಯ ಪೊಲೀಸ್​ ಅತಿಥಿಯಾಗಿದ್ದಾನೆ.

ಖತಾರ್ನಾಕ್ ಕಳ್ಳ ಅಂದರ್

By

Published : Jun 21, 2019, 1:39 AM IST

ನಾಗಮಂಗಲ (ಬೆಂಗಳೂರು): ಕದ್ದ ಚಿನ್ನ ಮಾರಾಟ ಮಾಡಲು ಯತ್ನಿಸಿದ ಕಳ್ಳನನ್ನ ‌ಗೋಲ್ಡ್ ಕಂಪೆನಿ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಹಿಡಿದು ಚಿನ್ನ ಸಮೇತ ಬಸವೇಶ್ವರ ನಗರ‌ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಗಮಂಗಲದ ಪ್ರದೀಪ್​​ ಎಂಬಾತ ಚಿನ್ನ ಕದ್ದ ಆರೋಪಿ. ಬಸವೇಶ್ವರ ನಗರದ ಅಕ್ಷಯ ಗೋಲ್ಡ್ ಬ್ರಾಂಚ್​ಗೆ ಹೋಗಿ 20ಗ್ರಾಂ ನಷ್ಟು ಓಲೆ, ತಾಳಿ, ಉಂಗುರ ಮಾರಾಟ ಮಾಡಿದ್ದಾನೆ. ಚಿನ್ನಾಭರಣ ನೋಡಿ ಅನುಮಾನಗೊಂಡ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲಿಸರು ಕೂಡಲೇ ಆತನನ್ನ ಸೆರೆ ಹಿಡಿದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದೆ.

ಅಕ್ಷಯ ಗೋಲ್ಡ್ ಕಂಪೆನಿ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಖತಾರ್ನಾಕ್ ಕಳ್ಳ ಅಂದರ್

ಈ ಮೊದಲು ಈತ ದಾಸರಹಳ್ಳಿ ಬ್ರಾಂಚ್ ಅಕ್ಷಯ ಗೋಲ್ಡ್​ ಕಂಪೆನಿಗೆ ಸುಮಾರು 60 ಗ್ರಾಂ. ಚಿನ್ನ ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ನಾಗಮಂಗಲ ಪೊಲೀಸರು ಕದ್ದ ಚಿನ್ನ ರಿಕವರಿ ಮಾಡಿದ್ದಾರೆ. ಸದ್ಯ ಪ್ರದೀಪ್​ ಬಸವೇಶ್ವರ ನಗರ ಪೊಲೀಸ್​​ ವಶದಲ್ಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details