ಬೆಂಗಳೂರು: ಕನಿಷ್ಠ ಬೆಂಬಲ ಬೆಲೆಯನ್ನ ಶಾಸನ ಬದ್ಧ ಬೆಂಬಲ ಬೆಲೆ ಎಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೈಗಾರಿಕಾ ಉತ್ಪನ್ನ ಬೆಳೆಗಳಿಗೆ ಕಡಿಮೆ ಇರದಂತೆ ನೋಡಿಕೊಳ್ಳಬೇಕು ಎನ್ನುವುದು ಸೇರಿದಂತೆ ಹಲವು ಅಂಶಗಳನ್ನೊಳಗೊಂಡಂತೆ ಕೃಷಿ ಬೆಲೆ ಆಯೋಗ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿಯನ್ನು ಸಲ್ಲಿಸಿದೆ.
'ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧ ಬೆಂಬಲ ಬೆಲೆ ಎಂದು ಘೋಷಿಸಿ' - ಕೃಷಿ ಬೆಲೆ ಆಯೋಗ
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿ ಹಾಗೂ ರೈತರು ಮತ್ತು ಗ್ರಾಹಕರುಗಳ ನಡುವಿನ ಬೆಲೆ ಪ್ರಸರಣ ವಿಶ್ಲೇಷಣೆ ಕುರಿತು ಕೃಷಿ ಬೆಲೆ ಆಯೋಗ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿಯನ್ನು ಸಲ್ಲಿಸಿತು.
ಸಿಎಂ ಬಸವರಾಜ ಬೊಮ್ಮಾಯಿಗೆ ವರದಿ ಸಲ್ಲಿಸಿದ ಕೃಷಿ ಬೆಲೆ ಆಯೋ
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿ ಹಾಗೂ ರೈತರು ಮತ್ತು ಗ್ರಾಹಕರುಗಳ ನಡುವಿನ ಬೆಲೆ ಪ್ರಸರಣ ವಿಶ್ಲೇಷಣೆ ಕುರಿತು ಕೃಷಿ ಬೆಲೆ ಆಯೋಗ ಇಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ವರದಿಯನ್ನು ಸಲ್ಲಿಸಿತು. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾದ ನಿಯೋಗ ವರದಿ ಸಲ್ಲಿಕೆ ಜೊತೆಗೆ ಹಲವು ಶಿಫಾರಸುಗಳನ್ನು ಮಾಡಿದೆ.
ಸರ್ಕಾರಕ್ಕೆ ಕೃಷಿ ಬೆಳೆ ಆಯೋಗ ಮಾಡಿದ ಶಿಫಾರಸುಗಳು :
- ಜಿಲ್ಲೆಗಳ ಕ್ಲಸ್ಟರ್ ಬೆಲೆ ಪರಿಗಣಿಸಬೇಕು, ತುಂಗಭದ್ರಾ ಅಚ್ಚುಕಟ್ಟು ಸೋನಾಮಸೂರಿ, ಕರಾವಳಿ ಕರ್ನಾಟಕದ ಕುಸುಬಲಕ್ಕಿ, ಮಂಗಳೂರು ಗೋಡಂಬಿ, ಬಿಜಾಪುರದ ದ್ರಾಕ್ಷಿ, ಮಲೆನಾಡು ಕರಿ ಮೆಣಸು ಕ್ಲಸ್ಟರ್ ಪರಿಗಣಿಸಬೇಕು.
- ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ರೈತನ ಆದಾಯ ಹೆಚ್ಚಿಸಿಕೊಳ್ಳುವುದು.
- ಬೆಳೆ ವಿಮೆ ಕಡ್ಡಾಯ ಮಾಡುವುದು. ವಿಮೆ ಮೊತ್ತವನ್ನು ರೈತ ಸಮ್ಮಾನ್ ಯೋಜನೆಯಿಂದ ಭರಿಸಿಕೊಳ್ಳಬೇಕು.
- ತಮ್ಮ ಜಮೀನಿನಲ್ಲಿ ಕೆರೆ ನಿರ್ಮಿಸಿಕೊಳ್ಳಲು ಉತ್ತೇಜನ ನೀಡುವುದು.
- ಸರ್ಕಾರ ಪ್ರೋತ್ಸಾಹ ಧನ ನೀಡುವುದು. ನಾಲ್ಕು ಎಕರೆ ಜಮೀನು ಇದ್ರೆ 10 ಗುಂಟೆ ಜಮೀನಿನಲ್ಲಿ ಕೆರೆ ನಿರ್ಮಿಸಿಕೊಳ್ಳುವುದು.
- ಸುತ್ತಮುತ್ತಲಿನ ರೈತರು ಸೇರಿ ಮಾಡಿಕೊಂಡ್ರೆ ಐದು ಸಾವಿರ ಎಕರೆಗೆ ಒಂದು ಟಿಎಂಸಿ ನೀರು ಸಂಗ್ರಹಿಸಬಹುದು.
- ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಸರ್ಕಾರ ಕೊಡ್ತಿರುವ ಪ್ರೋತ್ಸಾಹ ಧನ ಹೆಚ್ಚಿಸುವುದು ಸೂಕ್ತ.
- 6 ಸಾವಿರವನ್ನು ಕೇಂದ್ರ ಸರ್ಕಾರ ಹತ್ತು ಸಾವಿರಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಬೇಕು.
- ರಾಜ್ಯ ಸರ್ಕಾರ ಕೊಡ್ತಿರುವ ನಾಲ್ಕು ಸಾವಿರ ರೂಪಾಯಿಯನ್ನ ಆರು ಸಾವಿರಕ್ಕೆ ಹೆಚ್ಚಿಸಬೇಕು.ಎರಡು ಕಂತುಗಳಲ್ಲಿ ಬಿಡುಗಡೆ ಮಾಡಬೇಕು.
- ರಫ್ತು ಉತ್ತೇಜಿಸಲು ಅಂತರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ರೈತರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಿಕೊಡುವುದು.
- ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕಾಡಿನಲ್ಲಿ ಗೆಡ್ಡೆ ಗೆಣಸು ಮತ್ತು ಹಣ್ಣು ಹಂಪಲು ಗಿಡ ಬೆಳೆಸಬೇಕು, ಕಾಡು ಪ್ರಾಣಿಗಳಿಂದ ರೈತನ ಬೆಳೆ ರಕ್ಷಣೆ ಮಾಡಬೇಕು.
- ಕನಿಷ್ಠ ಬೆಂಬಲ ಬೆಲೆಯನ್ನ ಶಾಸನ ಬದ್ಧ ಬೆಂಬಲ ಬೆಲೆ ಎಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೈಗಾರಿಕಾ ಉತ್ಪನ್ನ ಬೆಳೆಗಳಿಗೆ ಕಡಿಮೆ ಇರದಂತೆ ನೋಡಿಕೊಳ್ಳಬೇಕು.
- ರೈತರ ಬೀಜ ಬಿತ್ತನೆ ಬಗ್ಗೆ ಮಾಹಿತಿ ಹಾಗು ಹೆಚ್ಚು ಇಳುವರಿ ಕೊಡುವ ರೋಗನಿರೋಧಕ ಶಕ್ತಿ ಇರುವ ಬೀಜ ಪೂರೈಕೆ ಮಾಡಬೇಕು.
- ಯಾಂತ್ರೀಕೃತ ಬೇಸಾಯಕ್ಕೆ ಪ್ರೋತ್ಸಾಹ ಕೊಡಬೇಕು.
- ರೈತರಿಗೆ ಕಡಿಮೆ ಬೆಲೆಯಲ್ಲಿ ಯಂತ್ರೋಪಕರಣಗಳು ಸಿಗುವಂತೆ ಆಗಬೇಕು.
- ಹೊಲಕ್ಕೊಂದು ಕೆರೆ ಆಂದೋಲನ ರೂಪಿಸುವುದು. ಇಲ್ಲವೆ ಕೃಷಿ ಹೊಂಡ ನಿರ್ಮಾಣ ಮಾಡಲು ಪ್ರೋತ್ಸಾಹಿಸುವುದು.
- ಮಣ್ಣಿನ ಫಲವತ್ತತೆ ಹೆಚ್ಚಿಸಲು ಭೂಮಿಯ ಒಳಗೆ ಹಸಿರು ಎಲೆ ಹಾಕುವುದು ಕಡ್ಡಾಯ ಮಾಡುವುದು.ಇದನ್ನು ಆಂದೋಲನದ ರೀತಿಯಲ್ಲಿ ಕಾರ್ಯಗತ ಮಾಡುವುದು.
- ಕೆರೆ ನಿರ್ಮಾಣಕ್ಕೆ ಸಬ್ಸಿಡಿ ನೀಡುವುದು, ಎಸ್ಸಿ,ಎಸ್ಟಿ ಗೆ ಶೇಕಡಾ 50 ರಷ್ಟು ಮತ್ತು ಜನರಲ್ ಗೆ ಶೇಕಡಾ 25 ರಷ್ಟು ಸಬ್ಸಿಡಿ ನೀಡುವುದು.
- ಕೃಷಿ ಅಧುನೀಕರಣ ಮತ್ತು ಇಳುವರಿ ಹೆಚ್ಚಳ ಮತ್ತು ರೈತರ ಆದಾಯ ದುಪ್ಪಟ್ಟು ಆಗಲು ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಕೃಷಿ ಬೆಲೆ ಆಯೋಗ ಮಾಡಿದೆ.