ಕರ್ನಾಟಕ

karnataka

ETV Bharat / state

ವಿಶೇಷ ಪ್ಯಾಕೇಜ್ ನಲ್ಲಿ ಬಿಟ್ಟಿರುವ ಕೆಲ ವರ್ಗ ಸೇರಿಸಿ:  ಬಿಜೆಪಿ ನಿಯೋಗದ ಮನವಿ - 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್

ನಿನ್ನೆ ಸಿಎಂ ಬಿ.ಎಸ್​.ಯಡಿಯೂರಪ್ಪ ವಿವಿಧ ಶ್ರಮಿಕ ವರ್ಗಗಳ ಶ್ರೇಯೋಭಿವೃದ್ಧಿಗೆ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದು, ಇದರಲ್ಲಿ ಕೆಲವು ವರ್ಗ ಬಿಟ್ಟುಹೋಗಿದೆ. ಈ ಪಟ್ಟಿಯಲ್ಲಿ ಸೇರಿರದ ವರ್ಗಗಳಿಗೂ ನೆರವು ನೀಡುವಂತೆ ಬಿಜೆಪಿ ನಿಯೋಗ ಸಿಎಂಗೆ ಮನವಿ ಮಾಡಿತು.

BJP delegation
ಎಂಎಲ್ ಸಿ ರವಿಕುಮಾರ್

By

Published : May 7, 2020, 1:00 PM IST

ಬೆಂಗಳೂರು: ವಿವಿಧ ವರ್ಗಗಳಿಗೆ ಘೋಷಣೆ ಮಾಡಿರುವ 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನಲ್ಲಿಇನ್ನೂ ಕೆಲ ವರ್ಗಕ್ಕೆ ಅವಕಾಶ ಸಿಕ್ಕಿಲ್ಲ, ಹೀಗಾಗಿ ಅಂತಹ ವರ್ಗಗಳನ್ನೂ ಗಮನಿಸಬೇಕು ಹಾಗೂ ಆ ವರ್ಗಕ್ಕೂ ನೆರವು ಘೋಷಿಸುವಂತೆ ಬಿಜೆಪಿ ಶಾಸಕರ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಶಾಸಕರಾದ ಶಿವರಾಜ್ ಪಾಟೀಲ್, ರಾಜುಗೌಡ ಪ್ರತಾಪ್ ಗೌಡ ಪಾಟೀಲ್, ಎಂಎಲ್ ಸಿ ರವಿಕಮಾರ್ ಅವರಿದ್ದ ಬಿಜೆಪಿ ನಿಯೋಗ ಭೇಟಿ ನೀಡಿತು. ವಿಶೇಷ ಪ್ಯಾಕೇಜ್ ನಲ್ಲಿ ಬಿಟ್ಟು ಹೋದ‌ ಕೆಲ ವರ್ಗಕ್ಕೂ ಅವಕಾಶ ಕಲ್ಪಿಸುವ ಸಂಬಂಧ ಸಮಾಲೋಚನೆ ನಡೆಸಿತು.

ಎಂಎಲ್ ಸಿ ರವಿಕುಮಾರ್

ಸಿಎಂ ಭೇಟಿ ಬಳಿಕ ಮಾತನಾಡಿದ ಎಂಎಲ್ ಸಿ ರವಿಕುಮಾರ್, ನಿನ್ನೆ ಸಿಎಂ ಹಲವು ವರ್ಗಕ್ಕೆ ನೆರವು ಘೋಷಿಸಿದ್ದಾರೆ, ಈ ರೀತಿ ವಿಶೇಷ ಪ್ಯಾಕೇಜ್ ಮೂಲಕ ನೆರವು ಘೋಷಿಸಿದ ರಾಜ್ಯಗಳಲ್ಲಿ ನಮ್ಮ ಸಿಎಂ ಮೊದಲು, ನಮ್ಮ ಸರ್ಕಾರ ಎಲ್ಲರಿಗೂ ನ್ಯಾಯವನ್ನ ಒದಗಿಸಿದೆ. ಇನ್ನು ಕೆಲವು ವರ್ಗಗಳನ್ನ ನೆರವಿನಡಿ ಬಿಡಲಾಗಿದೆ. ಹೀಗಾಗಿ ಇಂದು ಸಿಎಂ ಭೇಟಿ ಮಾಡಿ ನೆರವು ಘೋಷಿಸುವಂತೆ ಮನವಿ ಮಾಡಿದ್ದೇವೆ ಎಂದರು.

ಕಮ್ಮಾರ, ಕೊರಚ, ಮೇದಾರ, ಕುಂಬಾರ, ಚಮ್ಮಾರ, ದರ್ಜಿ, ಅಡಿಗೆ ಕೆಲಸ ಮಾಡುವವರಿಗೂ ಪ್ಯಾಕೇಜ್ ಘೋಷಣೆಗೆ ಮನವಿ ಮಾಡಿದ್ದೇವೆ, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ABOUT THE AUTHOR

...view details