ಕರ್ನಾಟಕ

karnataka

By

Published : Jul 18, 2021, 10:37 PM IST

ETV Bharat / state

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ನಟಿ ಶೃತಿಗೆ ಕೊಕ್

ಕಾಪು ಸಿದ್ದಲಿಂಗಸ್ವಾಮಿ ಸಿಎಂ ಯಡಿಯೂರಪ್ಪರ ಆಪ್ತರಾಗಿದ್ದು, ಇದೀಗ ಅವರನ್ನು ನಿಗಮದ ಅಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಇದೇ ಜನವರಿಯಲ್ಲಿ ಶೃತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿತ್ತು.

actress-shruthi-removed-from-president-of-the-tourism-development-corporation
ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ನಟಿ ಶೃತಿಗೆ ಕೊಕ್..!

ಬೆಂಗಳೂರು:ನಟಿ ಶೃತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೊಕ್ ನೀಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶೃತಿ ನೇಮಕಾತಿಯನ್ನು ಹಿಂಪಡೆದು ಕಾಪು ಸಿದ್ದಲಿಂಗಸ್ವಾಮಿ ಅವರಿಗೆ ಅಧ್ಯಕ್ಷ ಸ್ಥಾನ‌ ನೀಡಲಾಗಿದೆ.

ಕಾಪು ಸಿದ್ದಲಿಂಗಸ್ವಾಮಿ ಸಿಎಂ ಯಡಿಯೂರಪ್ಪರ ಆಪ್ತರಾಗಿದ್ದು, ಇದೀಗ ಅವರನ್ನು ನಿಗಮದ ಅಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಇದೇ ಜನವರಿಯಲ್ಲಿ ಶೃತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿತ್ತು. ಅಧಿಕಾರ ಸ್ವೀಕರಿಸಿ 6 ತಿಂಗಳಲ್ಲೇ ಶೃತಿಗೆ ಕೊಕ್ ನೀಡಲಾಗಿರುವುದು ಅಚ್ಚರಿ ಮೂಡಿಸಿದೆ.

ABOUT THE AUTHOR

...view details