ಬೆಂಗಳೂರು:ಡ್ರಗ್ಸ್ ನಂಟು ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ನಿಂದ ಜಾಮೀನು ಸಿಕ್ಕಿ ಎರಡು ದಿನಗಳು ಕಳೆದಿವೆ. ಆದರೆ, ಜಾಮೀನು ಆದೇಶ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ಬಂದು ತಲುಪುವ ಪ್ರಕ್ರಿಯೆ ಸಾಕಷ್ಟು ಇರುವುದರಿಂದ ಇಂದು ಸಂಜೆ ರಾಗಿಣಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಜಾಮೀನು ಸಿಕ್ಕರೂ ಯಾಕಿಷ್ಟು ತಡ ಎಂದು ನಿನ್ನೆ ಸಿಬ್ಬಂದಿ ಬಳಿ ನೋವು ತೋಡಿಕೊಂಡಿದ್ದ ರಾಗಿಣಿ, ವಕೀಲರೊಂದಿಗೂ ವಿಳಂಬದ ಕುರಿತು ಮಾತನಾಡಿದ್ದರು. ನಂತರ ಪೋಷಕರೊಂದಿಗೆ ಈ ಕುರಿತು ಬೇಸರ ವ್ಯಕ್ತಪಡಿಸಿದ್ದರು.