ಕರ್ನಾಟಕ

karnataka

ಒಂದು ಹೆಣ್ಣಾಗಿ ಈ ರೀತಿ ಮಾಡೋಕೆ ಎಷ್ಟು ಧೈರ್ಯ?: ನಟ ದರ್ಶನ್

By

Published : Jul 13, 2021, 2:58 PM IST

Updated : Jul 13, 2021, 3:06 PM IST

ಬೆಂಗಳೂರಿನಲ್ಲಿ ನಟ ದರ್ಶನ್ ಇಂದು ನಿರ್ಮಾಪಕ ಉಮಾಪತಿ ಪರ ಬ್ಯಾಟಿಂಗ್ ಮಾಡಿದ್ದಾರೆ‌. ಅಲ್ಲದೇ ವಿಡಿಯೋ, ಆಡಿಯೋ ಬಿಡಿ, ಒಂದು ಹೆಣ್ಣಾಗಿ ಈ ರೀತಿ ಮಾಡೋಕೆ ಎಷ್ಟು ಧೈರ್ಯ ಎಂದು ಅರುಣಾ ಕುಮಾರಿ ವಿರುದ್ಧ ಗುಡುಗಿದ್ದಾರೆ..

: ನಟ ದರ್ಶನ್
: ನಟ ದರ್ಶನ್

"ಉಮಾಪತಿ ಜೊತೆಗೆ ಈಗಲೂ ನನಗೆ ಕನೆಕ್ಷನ್ ಇದೆ. ನನಗೂ ಕೆಲವು ವೈಯಕ್ತಿಕ ಮಾಹಿತಿ ಇರುತ್ತೆ. ಇನ್ನು, ಉಮಾಪತಿಯನ್ನು ಟಾರ್ಗೆಟ್ ಆಗಿದ್ದಾರೆ ಅನಿಸುತ್ತೆ. ಆದರೆ, ಆ ಅರುಣಾಕುಮಾರಿಗೆ ಈ ರೀತಿ ಮಾಡೋಕೆ ಎಷ್ಟು ಧೈರ್ಯ..? ವಿಡಿಯೋ, ಆಡಿಯೋ ಬಿಡಿ, ಒಂದು ಹೆಣ್ಣಾಗಿ ಈ ರೀತಿ ಮಾಡೋಕೆ ಎಷ್ಟು ಧೈರ್ಯ" ಎಂದು ದರ್ಶನ್ ಅರುಣಾ ಕುಮಾರಿ ವಿರುದ್ಧ ತಿರುಗಿ ಬಿದ್ದಿದ್ದಾರೆ‌.

ನಿರ್ಮಾಪಕ ಉಮಾಪತಿ ಪರ ಬ್ಯಾಟ್ ಬೀಸಿದ ನಟ ದರ್ಶನ್

ನಟ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಟ್ವಿಸ್ಟ್ ಪಡೆಯುತ್ತಿದೆ‌. ನಿನ್ನೆಯಷ್ಟೇ ದರ್ಶನ್ ಮೈಸೂರಿನಲ್ಲಿ ಈ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದರು.

ಈ ಮಧ್ಯೆ ಈ ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಅರುಣಾಕುಮಾರಿ ಕೂಡ, ಹೊಸ ಬಾಂಬ್ ಸಿಡಿಸುವ ಮೂಲಕ ನಿರ್ಮಾಪಕ ಉಮಾಪತಿ ನನ್ನನ್ನ ಈ ಪ್ರಕರಣದಲ್ಲಿ ಬಳಸಿಕೊಂಡಿದ್ದು ತಪ್ಪು ಅಂತಾ ನೇರವಾಗಿ ಆರೋಪಿಸಿದರು. ಈ‌ ಎಲ್ಲಾ ಬೆಳವಣಿಗೆಗಳ ಬಳಿಕ, ಬೆಂಗಳೂರಿನಲ್ಲಿ ನಟ ದರ್ಶನ್ ಇಂದು ನಿರ್ಮಾಪಕ ಉಮಾಪತಿ ಪರ ಬ್ಯಾಟಿಂಗ್ ಮಾಡಿದ್ದಾರೆ‌.

ಓದಿ : ದರ್ಶನ್​ ಪ್ರಕರಣದಲ್ಲಿ ಉಮಾಪತಿ ನನ್ನ ಬಳಸಿಕೊಂಡಿದ್ದು ತಪ್ಪು: ಅರುಣಾ ಕುಮಾರಿ

Last Updated : Jul 13, 2021, 3:06 PM IST

For All Latest Updates

TAGGED:

ABOUT THE AUTHOR

...view details