"ಉಮಾಪತಿ ಜೊತೆಗೆ ಈಗಲೂ ನನಗೆ ಕನೆಕ್ಷನ್ ಇದೆ. ನನಗೂ ಕೆಲವು ವೈಯಕ್ತಿಕ ಮಾಹಿತಿ ಇರುತ್ತೆ. ಇನ್ನು, ಉಮಾಪತಿಯನ್ನು ಟಾರ್ಗೆಟ್ ಆಗಿದ್ದಾರೆ ಅನಿಸುತ್ತೆ. ಆದರೆ, ಆ ಅರುಣಾಕುಮಾರಿಗೆ ಈ ರೀತಿ ಮಾಡೋಕೆ ಎಷ್ಟು ಧೈರ್ಯ..? ವಿಡಿಯೋ, ಆಡಿಯೋ ಬಿಡಿ, ಒಂದು ಹೆಣ್ಣಾಗಿ ಈ ರೀತಿ ಮಾಡೋಕೆ ಎಷ್ಟು ಧೈರ್ಯ" ಎಂದು ದರ್ಶನ್ ಅರುಣಾ ಕುಮಾರಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ನಟ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಟ್ವಿಸ್ಟ್ ಪಡೆಯುತ್ತಿದೆ. ನಿನ್ನೆಯಷ್ಟೇ ದರ್ಶನ್ ಮೈಸೂರಿನಲ್ಲಿ ಈ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದರು.