ಬೆಂಗಳೂರು: ಬಿಡಿಎ ವತಿಯಿಂದ ಅಕ್ರಮವಾಗಿ ಹಂಚಿಕೆ ಮಾಡಿರುವ ಜಾಗವನ್ನು ಬಿಡಿಸಿಕೊಡಿ ಎಂದು ನಟ ಚೇತನ್, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಬಿಡಿಎನಿಂದ ಅಕ್ರಮ ಜಾಗ ಹಂಚಿಕೆ.. ಮಾಜಿ ಪ್ರಧಾನಿ ಹೆಚ್ಡಿಡಿ ಭೇಟಿ ಮಾಡಿದ ನಟ ಚೇತನ್ - ಮಾಜಿ ಪ್ರಧಾನಿ ದೇವೇಗೌಡ
ಬಿಡಿಎ ವತಿಯಿಂದ ಅಕ್ರಮವಾಗಿ ಹಂಚಿಕೆ ಮಾಡಿರುವ ಜಾಗವನ್ನು ಬಿಡಿಸಿಕೊಡಿ ಎಂದು ನಟ ಚೇತನ್, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮನವಿ ಮಾಡಿದ್ದಾರೆ.
![ಬಿಡಿಎನಿಂದ ಅಕ್ರಮ ಜಾಗ ಹಂಚಿಕೆ.. ಮಾಜಿ ಪ್ರಧಾನಿ ಹೆಚ್ಡಿಡಿ ಭೇಟಿ ಮಾಡಿದ ನಟ ಚೇತನ್](https://etvbharatimages.akamaized.net/etvbharat/prod-images/768-512-4190317-thumbnail-3x2-chetan.jpg)
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತಿದ್ದ ಸಭೆಗೆ ಆಗಮಿಸಿ, ದೇವೇಗೌಡರನ್ನು ಭೇಟಿಯಾದ ನಟ ಚೇತನ್, ನಂದಿನಿ ಲೇಔಟ್ ವ್ಯಾಪ್ತಿಯ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದನ್ನು ಮಕ್ಕಳ ಆಟದ ಮೈದಾನಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಹೆಚ್ಡಿಡಿ, ಸಭೆ ಇರುವುದರಿಂದ ಸಂಜೆವರೆಗೂ ಇಲ್ಲೇ ಇರುತ್ತೇನೆ. ಆ ನಂತರ ಚರ್ಚಿಸೋಣ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ನಟ ಚೇತನ್ ಮಾತನಾಡಿ, ಮಕ್ಕಳು ಆಟವಾಡುವ ಮೈದಾನವನ್ನು ಜೆಸಿಬಿ ಮೂಲಕ ಒಡೆಯುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ವ್ಯಾಪ್ತಿಯ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನ ದಶಗಳಿಂದಲೂ ಇದೆ. ಆದರೆ, ಈಗ ಬಿಡಿಎ ಆ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಿದೆ. ಹಲವು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜವಾಗಲಿಲ್ಲ ಎಂದು ಹೇಳಿದರು.