ಕರ್ನಾಟಕ

karnataka

ETV Bharat / state

ರೆಸಾರ್ಟ್ ರಾಜಕಾರಣದ ವಿರುದ್ಧ ಪ್ರತಿಭಟನೆ; ಬಂಧನ - undefined

ತಾಜ್ ವಿವಾಂತ ಹೋಟೆಲ್ ಗೇಟ್​​ ಬಳಿ ಸಗಣಿ ಹಾಕಿ ವಿನೂತನ ಪ್ರತಿಭಟನೆಗೆ ಮುಂದಾದ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ರೆಸಾರ್ಟ್

By

Published : Jul 13, 2019, 7:49 PM IST

ಬೆಂಗಳೂರು:ರಾಜ್ಯ ಸರ್ಕಾರದ ಆಡಳಿತ ವೈಖರಿ, ವಿರೋಧ ಪಕ್ಷಗಳ ಶಾಸಕರ ರೆಸಾರ್ಟ್ ವಾಸ್ತವ್ಯ ವಿರೋಧಿಸಿ, ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ವಿವಾಂತ ಹೋಟೆಲ್‌ ಮುಂದೆ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದ್ರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂದಿಸಿದ್ರು.

ತಾಜ್ ವಿವಾಂತ ಹೋಟೆಲ್ ಗೇಟ್​​ ಬಳಿ ಸಗಣಿ ಹಾಕುವ ಮೂಲಕ ವಿನೂತನ ಪ್ರತಿಭಟನೆಗೆ ಸಂಘಟನೆ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗಿತ್ತು. ಆದರೆ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಹೀಗಾಗಿ ಪ್ರತಿಭಟನೆ ನಡೆಯಲಿಲ್ಲ.

ಪ್ರತಿಭಟನೆಗೆ ಮುಂದಾದವರ ಬಂಧನ

ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಪ್ರತಿಭಟನಾಕಾರ ಲಿಂಗರಾಜಗೌಡ, ಶಾಸಕರು ಸಚಿವರು ರೆಸಾರ್ಟ್​​ನಲ್ಲಿರುವ ಬದಲು ವಿಧಾನಸೌಧ ಅಥವಾ ತಮ್ಮ ತಮ್ಮ ಕ್ಷೇತ್ರಗಳಿಗೆ ಮರಳಬೇಕು ಎಂದು ಆಗ್ರಹಿಸಿದರು.

For All Latest Updates

TAGGED:

ABOUT THE AUTHOR

...view details