ಬೆಂಗಳೂರು: ಅಧಿಕಾರಿಗಳ ಗ್ಯಾಲರಿಯ ಕುರ್ಚಿಗಳು ಖಾಲಿಯಾಗಿದ್ದನ್ನು ನೋಡಿ ಕಾರ್ಪೊರೇಟರ್ ಗುಣಶೇಖರ್ ಆಕ್ಷೇಪ ವ್ಯಕ್ತಪಡಿಸಿ, ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಐದು ಸಾವಿರ ದಂಡ ವಿಧಿಸುವಂತೆ ಗುಣಶೇಖರ್ ಆಗ್ರಹಿಸಿದರು.
ಆಯುಕ್ತ ಮಂಜುನಾಥ್ ಪ್ರಸಾದ್ ಇದಕ್ಕೆ ಉತ್ತರಿಸಿ, ಸಭೆಗಳಿಗೆ ಬರುವುದು ಅಧಿಕಾರಿಗಳ ಕರ್ತವ್ಯ. ಸಮಸ್ಯೆಗಳ ಬಗ್ಗೆ ಟಿಪ್ಪಣಿ ಮಾಡಿ ಬಗೆಹರಿಸಬೇಕಾಗುತ್ತದೆ. ಸಭೆಗೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿ, ನೊಟೀಸ್ ಕೊಡಲಾಗಿದೆ. ಆದರೂ ಇಬ್ಬರು ಅಧಿಕಾರಿಗಳು ಅನುಮತಿ ಪಡೆದು ಗೈರಾಗಿದ್ದರೆ, ಉಳಿದವರ ಮಾಹಿತಿ ಇಲ್ಲ. ಯೋಜನೆ ವಿಶೇಷ ಆಯುಕ್ತರು ಚುನಾವಣಾ ನಿಮಿತ್ತ ಹೋಗಿದ್ದಾರೆ. ರಂದೀಪ್ ಅವರು ಅನುಮತಿ ಪಡೆದು ಬೇರೆ ಕೆಲಸಕ್ಕೆ ಹೋಗಿದ್ದಾರೆ. ಉಳಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶೋಕಾಸ್ ನೊಟೀಸ್ ನೀಡಲಾಗುವುದು. ಅವರ ಉತ್ತರ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದರು.