ಕರ್ನಾಟಕ

karnataka

By

Published : Apr 21, 2022, 4:23 PM IST

ETV Bharat / state

ರಾಜ್ಯ ರೈತ ಸಂಘ ಮುಂದಿನ ಚುನಾವಣೆಯಲ್ಲಿ ಆಪ್ ಜೊತೆ ಕೈಜೋಡಿಸಲಿದೆ: ಕೋಡಿಹಳ್ಳಿ

ಭ್ರಷ್ಟಾಚಾರರಹಿತ ಆಡಳಿತ ಸಿಗುತ್ತಿಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ಯಾವುದೇ ರಾಜ್ಯದಲ್ಲಿಯೂ ಭ್ರಷ್ಟಾಚಾರರಹಿತ ಸರ್ಕಾರ ನೀಡಲು ಸಾಧ್ಯವಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

Kodihalli Chandrasekhar
ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ

ಬೆಂಗಳೂರು:ಗುಂಡು ಹಾಕಿದ ಕಾಂಗ್ರೆಸ್ ಹಾಗೂ ಕೊಂದು ಹಾಕುವ ಬಿಜೆಪಿಯನ್ನು ಜನ ನಂಬಲು ಸಾಧ್ಯವಿಲ್ಲ. ಹೀಗಾಗಿ ನಾವು ದೃಢ ನಿರ್ಧಾರ ಕೈಗೊಳ್ಳುವ ಸಮಯ ಎದುರಾಗಿದೆ ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೈತ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಯಾವುದೇ ಪ್ರಾದೇಶಿಕ ಪಕ್ಷವೂ ಭ್ರಷ್ಟಾಚಾರರಹಿತ ಆಡಳಿತ ನೀಡುತ್ತಿಲ್ಲ. ಈ ಸಂದರ್ಭದಲ್ಲಿ ಇಡೀ ದೇಶಕ್ಕೆ ಮಾದರಿ ಅರವಿಂದ ಕೇಜ್ರಿವಾಲ್. ಭ್ರಷ್ಟಾಚಾರದ ಅಂತಿಮ ಘಟ್ಟ ರಾಜ್ಯದಲ್ಲಿದೆ. ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಕ್ಕೆ ಪರ್ಯಾಯವಾಗಿ ಒಂದು ಪಕ್ಷ ಸರ್ಕಾರ ರಚಿಸಬೇಕು. ಹೀಗಾಗಿ ರಾಜ್ಯ ರೈತ ಸಂಘ 2023 ರ ಚುನಾವಣೆಯಲ್ಲಿ ಆಮ್ ಆದ್ಮಿ ಜತೆ ಕೈಜೋಡಿಸಿ ವಿಧಾನಸಭೆ ಪ್ರವೇಶಿಸಬೇಕು. ನಾವ್ಯಾರೂ ಕಳ್ಳರಲ್ಲ, ದುಡಿಯುವವರು, ಅನ್ನ ನೀಡುವವರು. ತೆರಿಗೆಯನ್ನು ಪ್ರಾಮಾಣಿಕವಾಗಿ ಕಟ್ಟುತ್ತೇವೆ. ಆದರೆ, ನಾವು ಮಾತ್ರ ಬಿಕಾರಿಗಳಂತೆ ಬಾಳಬೇಕಾ? ಎಂದು ಪ್ರಶ್ನಿಸಿದರು.

ರಾಜ್ಯ ರೈತ ಸಂಘದ ರಾಜಕೀಯ ಮುಖವಾಣಿ ಆಮ್ ಆದ್ಮಿ ಪಕ್ಷ. ಚುನಾವಣಾ ಅಸ್ತ್ರ ಪೊರಕೆ. ರೈತ ಸಂಘ ಸ್ವತಂತ್ರವಾಗಿ ಇರಲಿದೆ. ರೈತ ಪರ ಮುಂದುವರಿಯುವ ಕಾರ್ಯ ಮಾಡಿ, ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ದುಡಿಯುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಕರ್ನಾಟಕದಲ್ಲೂ ಆಪ್‌ ಆಡಳಿತದ ನಡೆಸಲಿದೆ: ಕೇಜ್ರಿವಾಲ್ ವಿಶ್ವಾಸ

For All Latest Updates

TAGGED:

ABOUT THE AUTHOR

...view details