ಕರ್ನಾಟಕ

karnataka

ETV Bharat / state

ಏನ್​ ಸಮಾಚಾರ ಎಂದು ಕೆಣಕಿದ್ದಕ್ಕೆ ರೌಡಿಶೀಟರ್​​ ಹೆಣವನ್ನೇ ಉರುಳಿಸಿದ್ರು! - undefined

ಬೆಂಗಳೂರಲ್ಲಿ ಮತ್ತೆ ನೆತ್ತರು ಹರಿದಿದೆ. ಏನ್​ ಸಮಾಚಾರ ಎಂದು ಕೆಣಕಿದ್ದ ರೌಡಿಶೀಟರ್​ನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಿಲಕ್​ ನಗರದ ಬಿಟಿಪಿ ಲೇಔಟ್​ನಲ್ಲಿ ನಡೆದಿದೆ.

ರಾಜಶೇಖರ್​ ಅಲಿಯಾಸ್​ ರಾಜೇಶ್​, ಮೃತ ರೌಡಿಶೀಟರ್​

By

Published : May 20, 2019, 9:46 PM IST

ಬೆಂಗಳೂರು: ರೌಡಿಶೀಟರ್​ವೋರ್ವ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ತಿಲಕ್ ನಗರದ ಬಿಟಿಪಿ ಲೇಔಟ್​ನಲ್ಲಿ ನಡೆದಿದೆ.

ರಾಜಶೇಖರ್​ ಅಲಿಯಾಸ್​ ರಾಜೇಶ್​, ಮೃತ ರೌಡಿಶೀಟರ್​

ರಾಜಶೇಖರ್ ಅಲಿಯಾಸ್​ ರಾಜೇಶ್​ ಕೊಲೆಯಾಗಿರುವ ರೌಡಿಶೀಟರ್​. ನಿನ್ನೆ ರಾತ್ರಿ ರಾಜೇಶ್​​ನನ್ನು ವಿನೋದ್​ ಎಂಬಾತ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನಡೆದಿದ್ದೇನು: ತಿಲಕ್​ ನಗರದ ಬಿಟಿಪಿ ಪ್ರದೇಶದಲ್ಲಿ ಊರ ಹಬ್ಬ ನಡೆಯುತ್ತಿತ್ತು. ಈ ವೇಳೆ ವಿನೋದ್​ ಹಬ್ಬದ ಮುಂದಾಳತ್ವ ವಹಿಸಿಕೊಂಡಿದ್ದ. ಈ ವೇಳೆ ರಾಜಶೇಖರ್ ಹಾಗೂ ಆತನ ಸ್ನೇಹಿತರು ಏನ್ ಸಮಾಚಾರ ಎಂದು ವಿನೋದ್​ನನ್ನ ಕೆಣಕಿದ್ದರು ಎನ್ನಲಾಗ್ತಿದೆ. ಇದರಿಂದ ಕೆರಳಿದ ವಿನೋದ್ ತನ್ನ ಸಹೋದರನಿಗೆ ಈ ವಿಚಾರ ತಿಳಿಸಿದ್ದ. ನಂತರ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ವಿನೋದ್ ಹಾಗೂ ರಾಜಶೇಖರ್​ ಜಗಳವಾಡಿದ್ದರು. ಈ ವೇಳೆ ರಾಜಶೇಖರ್​ಗೆ ವಿನೋದ್ ಚಾಕುವಿನಿಂದ ಇರಿದಿದ್ದನಂತೆ. ತಕ್ಷಣ ರಾಜಶೇಖರ್​ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಈ ಸಂಬಂಧ ತಿಲಕ್​ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ‌ಮರೆಸಿಕೊಂಡಿರುವ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.

For All Latest Updates

TAGGED:

ABOUT THE AUTHOR

...view details