ಕರ್ನಾಟಕ

karnataka

ETV Bharat / state

ಕೋವಿಡ್​​ನಿಂದ ಮಾನಸಿಕ ನೆಮ್ಮದಿ ಕಳೆದುಕೊಂಡವರಿಗಾಗಿ ಉಚಿತ ಸಹಾಯವಾಣಿ

ಕೋವಿಡ್​​ ಸೋಂಕಿನಿಂದ ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡು ಆಘಾತ, ಖಿನ್ನತೆ, ಆತಂಕ, ನಿದ್ರಾಹೀನತೆ ಹೀಗೆ ನಾನಾ ರೀತಿಯ ಮಾನಸಿಕ ತೊಳಲಾಟಕ್ಕೆ ತುತ್ತಾದವರಿಗೆ ಸಹಾಯವಾಣಿ ಆರಂಭಿಸಲಾಗಿದೆ..

By

Published : Jun 23, 2021, 10:55 PM IST

a-free-helpline
ಉಚಿತ ಸಹಾಯವಾಣಿ

ಬೆಂಗಳೂರು : ಕೋವಿಡ್​​ ಸೋಂಕಿನಿಂದ ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡು ಆಘಾತ, ಖಿನ್ನತೆ, ಆತಂಕ, ನಿದ್ರಾಹೀನತೆ ಹೀಗೆ ನಾನಾ ರೀತಿಯ ಮಾನಸಿಕ ತೊಳಲಾಟಕ್ಕೆ ತುತ್ತಾದವರಿಗೆ ಉಚಿತವಾಗಿ ಸಲಹಾವಾಣಿ ಆರಂಭಿಸಲಾಗಿದೆ. ಯಲಹಂಕದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಡಾ. ಜ್ಯೋತಿ ನೀರಜಾ, ಹಲವು ಕುಟುಂಬಗಳು ತಮ್ಮವರನ್ನ ಕಳೆದುಕೊಂಡು ಅತೀವ ಆಘಾತಕ್ಕೆ ಒಳಗಾಗಿದ್ದಾರೆ. ಅದರಿಂದ ಹೊರ ಬರದೇ ನಿಸ್ಸಾಹಾಯಕರಾಗಿದ್ದಾರೆ. ಬಹಳಷ್ಟು ಜನ ಅನುಭವಿಸುತ್ತಿರುವುದು ಅನಿರೀಕ್ಷಿತ ಆಘಾತಗಳನ್ನ. ಇದರ ಪರಿಣಾಮವಾಗಿ ನಿತ್ಯವೂ ನೋವು, ಆತಂಕ ಕಾಡುತ್ತಲೇ ಇರುತ್ತದೆ. ಪ್ರೀತಿ ಪಾತ್ರರ ಸಾವನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಲೇಬೇಕು ಎಂದಿದ್ದಾರೆ.

ಉಚಿತ ಸಲಹಾವಾಣಿಗೆ ಸಂಬಂಧಿಸಿದಂತೆ ಹೆಚ್ಚಿನ ನೆರವು ಬೇಕಿದ್ದಲ್ಲಿ www.peopletreemaaarga.com ಭೇಟಿ ನೀಡಿ ಅಥವಾ 08046659999 ಕರೆ ಮಾಡಿ ಸಂಪರ್ಕಿಸಬಹುದು.

ABOUT THE AUTHOR

...view details