ಕರ್ನಾಟಕ

karnataka

ETV Bharat / state

ಬೆಂಕಿಯಿದ್ದ ಗೋಧಿ ತ್ಯಾಜ್ಯದ ಮೇಲೆ ಕಾಲಿಟ್ಟು ಬಾಲಕ ಗಂಭೀರ ಗಾಯ: ಚಿಕಿತ್ಸೆ ವೆಚ್ಚ ಬರಿಸಲಾಗದೆ ತಂದೆ ಕಂಗಾಲು - dumping wastage in lake

ತನ್ನ ತಾಯಿಯೊಂದಿಗೆ ಕಟ್ಟಿಗೆ ಹಾಯಲು ಹೋಗಿದ್ದ ಚಂದ್ರಶೇಖರ್​, ಕೆರೆಗೆ ಎಂದಿನಂತೆ ಸುರಿಯುತ್ತಿದ್ದ ಹೊಟ್ಟಿನಲ್ಲಿ ಬೆಂಕಿಯಿರುವುದು ಅರಿವಿಗೆ ಬಾರದೆ, ಬೂದಿಯ ಮೇಲೆ ಕಾಲಿಟ್ಟ ಪರಿಣಾಮ ಆಳದಲ್ಲಿದ್ದ ಕಾದ ಬೆಂಕಿ ಎರೆಡು ಕಾಲನ್ನು ಸುಟ್ಟಿದೆ. ಬೆಂಕಿ ಕಾಲಿಗೆ ಆವರಿಸಿದಾಗ ಮೇಲೇಳಲೂ ಆಸರೆ ಸಿಗದೆ ಜೋರಾಗಿ ಕಿರುಚಿದ್ದಾನೆ. ಮಗ ಮತ್ತು ತಾಯಿಯ ಕಿರುಚಾಟ ಕೇಳಿ ಸುತ್ತಲಿದ್ದ ಸ್ಥಳೀಯರು ಬಂದು ಹುಡುಗನನ್ನು ಮೇಲಕ್ಕೆತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಂಕಿಯಿದ್ದ ಗೋಧಿ ತ್ಯಾಜ್ಯದ ಮೇಲೆ ಕಾಲಿಟ್ಟು ಬಾಲಕ ಗಂಭೀರ ಗಾಯ
ಬೆಂಕಿಯಿದ್ದ ಗೋಧಿ ತ್ಯಾಜ್ಯದ ಮೇಲೆ ಕಾಲಿಟ್ಟು ಬಾಲಕ ಗಂಭೀರ ಗಾಯ

By

Published : Mar 17, 2021, 3:40 AM IST

ಆನೇಕಲ್: ಕಾರ್ಖಾನೆಗಳು ಕೆರೆಯಂಗಳದಲ್ಲಿ ಸುರಿದಿದ್ದ ಕೆಮಿಕಲ್​ ಮಿಶ್ರಿತ ಗೋದಿ ಹೊಟ್ಟಿನ ಬೆಂಕಿಯ ತಾಗಿ ಇಬ್ಬರು ಹುಡುಗರ ಕಾಲಿಗೆ ಗಂಭೀರ ಗಾಯವಾದ ಘಟನೆ ಅನೇಕಲ್​ನಲ್ಲಿ ನಡೆದಿದೆ.

ಆನೇಕಲ್​ನ ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿನ ಜೆ.ರಾಮಯ್ಯ ಫ್ಲೋರಿಂಗ್ ಮಿಲ್ ಕಾರ್ಖಾನೆಯ ಗೋದಿ ಹೊಟ್ಟನ್ನು ಕೆರೆಯಲ್ಲಿ ವಿಸರ್ಜನೆ ಮಾಡಿದೆ. ಇದು ಕೆಮಿಕಲ್​ ಮಿಶ್ರಿತವಾಗಿರುವುದರಿಂದ ಬೆಂಕಿಯಾಗಿ ಆ ಜಾಗದಲ್ಲಿ ಸದಾ ಉರಿಯುತ್ತಿರುತ್ತದೆ ಆದರೆ ನೋಡುವುದಕ್ಕೆ ಬೂದಿಯಂತೆ ಕಾಣುವುದರಿಂದ ದಾವಣಗೆರೆ ಮೂಲದ ಚಂದ್ರಶೇಖರ್ ಎಂಬಾತ ಅದರ ಮೇಲೆ ಕಾಲಿಟ್ಟು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕೆಮಿಕಲ್ ಮಿಶ್ರಿತ ಗೋಧಿ ತ್ಯಾಜ್ಯದ ಮೇಲೆ ಕಾಲಿಟ್ಟು ಬಾಲಕ ಗಂಭೀರ ಗಾಯ

ತನ್ನ ತಾಯಿಯೊಂದಿಗೆ ಕಟ್ಟಿಗೆ ಹಾಯಲು ಹೋಗಿದ್ದ ಚಂದ್ರಶೇಖರ್​, ಕೆರೆಗೆ ಎಂದಿನಂತೆ ಸುರಿಯುತ್ತಿದ್ದ ಹೊಟ್ಟಿನಲ್ಲಿ ಬೆಂಕಿಯಿರುವುದು ಅರಿವಿಗೆ ಬಾರದೆ, ಬೂದಿಯ ಮೇಲೆ ಕಾಲಿಟ್ಟ ಪರಿಣಾಮ ಆಳದಲ್ಲಿದ್ದ ಕಾದ ಬೆಂಕಿ ಎರಡು ಕಾಲಗಳನ್ನು ಸುಟ್ಟಿದೆ. ಬೆಂಕಿ ಕಾಲಿಗೆ ಆವರಿಸಿದಾಗ ಮೇಲೇಳಲೂ ಆಸರೆ ಸಿಗದೆ ಜೋರಾಗಿ ಕಿರುಚಿದ್ದಾನೆ. ಮಗ ಮತ್ತು ತಾಯಿಯ ಕಿರುಚಾಟ ಕೇಳಿ ಸುತ್ತಲಿದ್ದ ಸ್ಥಳೀಯರು ಬಂದು ಹುಡುಗನನ್ನು ಮೇಲಕ್ಕೆತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಮಾತನಾಡಿದ ಚಂದ್ರಶೇಖರ್ ತಂದೆ ಬಸವರಾಜು, ಘಟನೆ ನಡೆದಾಗ ನಾನು ಊರಲ್ಲಿ ಇರಲಿಲ್ಲ. ಮಗನನ್ನು ರಕ್ಷಿಸಿದವರು ನನಗೆ ಕರೆ ಮಾಡಿ ವಿಷಯ ತಿಳಿಸಿದರು. ಈಗಾಗಲೇ ನಾಲ್ಕೈದು ದಿನದಿಂದ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಮಗನ ಆಸ್ಪತ್ರೆ ಬಿಲ್ ನಾಲ್ಕೈದು ಲಕ್ಷ ದಾಟಿದೆ. ಮಿಲ್​ನವರ ಹತ್ತಿರ ಬಂದು ಕೇಳಿದರೆ 5 ಸಾವಿರ ಹಣ ನೀಡುವುದಾಗಿ ಹೇಳ್ತಿದ್ದಾರೆ. ಅದಕ್ಕಾಗಿ ಊರಿನ ಜನರನ್ನು ತಮಗೆ ನ್ಯಾಯಕೊಡಿಸಬೇಕೆಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ದಸಂಸ ಮುಖಂಡ ಬಳಗಾರನಹಳ್ಳಿ ಮಂಜುನಾಥ್ ಪ್ರತಿಕ್ರಿಯಿಸಿದ್ದು, ಈ ಸ್ಥಳದಲ್ಲಿ ಇದಕ್ಕೂ ಮುನ್ನ ಬೇರೊಬ್ಬ ವ್ಯಕ್ತಿ ಕೆರೆಯ ಕಡೆ ಹೋಗಿ ಬೂದಿ ಹುಸುಕಿನಲ್ಲಿ ಕಾಲಿಟ್ಟು ಗಾಯಗೊಂಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಫ್ಲೋರ್ ಮಿಲ್ ಮಾಲೀಕರು ಆಸ್ಪತ್ರೆ ಕಡೆಯತ್ತ ಮುಖ ಮಾಡದೆ ಅಮಾನವೀಯತೆ ಮೆರೆದಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸಂಘಟನೆಯವರು ಮತ್ತು ಊರಿನ ನಾಗರೀಕರು ಸಂಬಂದಪಟ್ಟ ಕಾರ್ಖಾನೆ ಹತ್ತಿರ ಬಂದು ವಿಚಾರಿಸಲು ಬಂದಾಗ ಯಾರು ಸ್ಪಂದಿಸದ ಕಾರಣ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details