ಬೆಂಗಳೂರು: ನರಗರದ ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರೀರಾಮನ 16 ಅಡಿ ಎತ್ತರದ ಮೂರ್ತಿಯ ಮೆರವಣಿಗೆಯೊಂದಿಗೆ ಶೋಭಾಯಾತ್ರೆ ನಡೆಯಿತು.
ತಾಲೂಕಿನ ಸಹಸ್ರಾರು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನಗರದ ಮುಖ್ಯ ರಸ್ತೆಗಳೆಲ್ಲವೂ ಕೇಸರಿಮಯವಾಗಿತ್ತು. ವಿಶ್ವೇಶ್ವರಯ್ಯ ಬಡಾವಣೆಯ ವಿವೇಕಾನಂದ ಶಾಲೆಯ ಮುಂಭಾಗದಿಂದ ಪ್ರಾರಂಭಗೊಂಡ ಮೆರವಣಿಗೆ ಕೆಇಬಿ ಸರ್ಕಲ್, ಹೂ ಮಂಡಿ ಸರ್ಕಲ್, ಮೆಲ್ ಪೇಟೆ, ಬಲೆ ಪೇಟೆ, ಕುರುಬರ ಪೇಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಿಸಿಲಿನ ತಾಪ ನಿವಾರಿಸಲು ಮಾರ್ಗದುದ್ದಕ್ಕೂ ಭಕ್ತರು ಪಾಲ್ಗೊಂಡಿದ್ದ ಸಹಸ್ರಾರು ಯುವಕರಿಗೆ ಮಜ್ಜಿಗೆ , ಪಾನಕ ವಿತರಿಸಲಾಯಿತು.