ಕರ್ನಾಟಕ

karnataka

By

Published : Jul 9, 2020, 5:33 PM IST

ETV Bharat / state

ಬೆಂಗಳೂರಲ್ಲಿ ಕೊರೊನಾ ನಿಯಂತ್ರಣಕ್ಕೆ 8 ಐಎಎಸ್​​ ಅಧಿಕಾರಿಗಳ ನೇಮಿಸಿದ ಸರ್ಕಾರ

ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಎಂಟು ಐಎಎಸ್​ ಅಧಿಕಾರಿಗಳನ್ನು ನೇಮಿಸಿದೆ.

8 IAS officers appointed, 8 IAS officers appointed for corona control, IAS officers appointed, IAS officers appointed news, 8 ಐಎಎಸ್ ಅಧಿಕಾರಿಗಳ ನೇಮಕ, ಕೊರೊನಾ ನಿಯಂತ್ರಣಕ್ಕೆ 8 ಐಎಎಸ್ ಅಧಿಕಾರಿಗಳ ನೇಮಕ, ಐಎಎಸ್ ಅಧಿಕಾರಿಗಳ ನೇಮಕ, ಐಎಎಸ್ ಅಧಿಕಾರಿಗಳ ನೇಮಕ ಸುದ್ದಿ,
ಕೊರೊನಾ ನಿಯಂತ್ರಣಕ್ಕೆ 8 ಐಎಎಸ್ ಅಧಿಕಾರಿಗಳ ನೇಮಿಸಿದ ಸರ್ಕಾರ

ಬೆಂಗಳೂರು: ನಗರದಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಪಾಲಿಕೆಯ ಎಂಟು ವಲಯಗಳಿಗೆ ಐಎಎಸ್ ಅಧಿಕಾರಿಗಳನ್ನು ಸಂಯೋಜಕರಾಗಿ ನೇಮಿಸಿ ಆದೇಶ ಹೊರಡಿಸಿದೆ.

ಕೊರೊನಾ ನಿಯಂತ್ರಣಕ್ಕೆ 8 ಐಎಎಸ್ ಅಧಿಕಾರಿಗಳ ನೇಮಿಸಿದ ಸರ್ಕಾರ

ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ, ಪರಿಶೀಲನೆ ಮತ್ತು ತಕ್ಷಣ ನಿರ್ಧಾರ ಕೈಗೊಳ್ಳಲು ಅನುವಾಗುವ ನಿಟ್ಟಿನಲ್ಲಿ ಈ ಸಂಯೋಜಕರು ಕಾರ್ಯನಿರ್ವಹಿಸಲಿದ್ದಾರೆ. ಈ ಎಂಟು ವಲಯ ಸಂಯೋಜಕರು ಬಿಬಿಎಂಪಿ ಆಯುಕ್ತರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ವಲಯವಾರು ಜವಾಬ್ದಾರಿ...

ಬೆಂಗಳೂರು ಪೂರ್ವ ವಲಯದ ಅಧಿಕಾರಿಯಾಗಿ ತುಷಾರ್ ಗಿರಿನಾಥ್, ಬೆಂಗಳೂರು ಪಶ್ಚಿಮ ವಲಯದ ಅಧಿಕಾರಿಯಾಗಿ ರಾಜೇಂದ್ರ ಕುಮಾರ್, ಬೊಮ್ಮನಹಳ್ಳಿ ವಲಯದ ಅಧಿಕಾರಿಯಾಗಿ ಕ್ಯಾ. ಪಿ.ಮಣಿವಣ್ಣನ್, ಯಲಹಂಕ ವಲಯದ ಅಧಿಕಾರಿಯಾಗಿ ನವೀನ್ ರಾಜ್ ಸಿಂಗ್, ಬೆಂಗಳೂರು ದಕ್ಷಿಣ ವಲಯದ ಅಧಿಕಾರಿಯಾಗಿ ಮುನಿಷ್ ಮೌದ್ಗಿಲ್, ಮಹದೇವಪುರ ವಲಯದ ಅಧಿಕಾರಿಯಾಗಿ ಡಾ. ಎನ್.ಮಂಜುಳಾ, ದಾಸರಹಳ್ಳಿ ವಲಯದ ಅಧಿಕಾರಿಯಾಗಿ ಡಾ. ಪಿ.ಸಿ.ಜಾಫರ್, ರಾಜರಾಜೇಶ್ವರಿ ನಗರ ವಲಯದ ಅಧಿಕಾರಿಯಾಗಿ ಡಾ. ಆರ್.ವಿಶಾಲ್ ನೇಮಕ ಆಗಿದ್ದಾರೆ.

ABOUT THE AUTHOR

...view details