ಬೆಂಗಳೂರು: ರಾಜ್ಯದಲ್ಲಿಂದು 44,438 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,46,303 ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿಂದು 44,438 ಮಂದಿಗೆ ವಕ್ಕರಿಸಿದ ಕೊರೊನಾ: ಹೆಮ್ಮಾರಿಗೆ ಮತ್ತೆ 239 ಬಲಿ
ರಾಜ್ಯದಲ್ಲಿ ಕರ್ಫ್ಯೂ ಜಾರಿಗೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ 44,438 ಮಂದಿಗೆ ಕೊರೊನಾ ಸೋಂಕು ತಗುಲಿ ಭೀತಿ ಹುಟ್ಟಿಸಿದೆ.
ಕರ್ನಾಟಕದಲ್ಲಿ 44,438 ಹೊಸ ಕೊರೊನಾ ಪ್ರಕರಣಗಳು
ಕೋವಿಡ್ಗೆ 239 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,250ಕ್ಕೆ ಏರಿಕೆ ಆಗಿದೆ. 20,901 ಮಂದಿ ಗುಣಮುಖರಾಗಿದ್ದು, ಇಲ್ಲಿ ತನಕ 11,85,299 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 4,44,734 ಕ್ಕೆ ಏರಿದೆ.
ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಖಡವಾರು ಶೇ 29.80 ರಷ್ಟಿದ್ದು, ಸಾವಿನ ಶೇಕಡಾವಾರು ಪ್ರಮಾಣ ಶೇ 0.53 ರಷ್ಟಿದೆ. ಯುಕೆಯಿಂದ 102 ಮಂದಿ ಆಗಮಿಸಿದ್ದಾರೆ. 62 ಮಂದಿಗೆ ಡಬಲ್ ಮ್ಯುಟೆಷನ್ ಸೋಂಕು ತಗುಲಿದೆ.