ಕರ್ನಾಟಕ

karnataka

By

Published : May 18, 2021, 10:56 PM IST

Updated : May 19, 2021, 5:29 PM IST

ETV Bharat / state

ವೈದ್ಯರ ಮೇಲೆ ಹಲ್ಲೆ ಪ್ರಕರಣ: ಇನ್ಸ್​ಪೆಕ್ಟರ್​ ಸೇರಿ ಮೂವರು ಸಸ್ಪೆಂಡ್

ವೈದ್ಯರ ಮೇಲೆ ಅನಗತ್ಯವಾಗಿ ಹಲ್ಲೆ ಮಾಡಿದ ಆರೋಪದ ಮೇಲೆ ಇನ್ಸ್​ಪೆಕ್ಟರ್​ ಕಾತ್ಯಾಯಿನಿ ಸೇರಿ ಇಬ್ಬರು ಹೆಡ್​ ಕಾನ್ಸ್​ಸ್ಟೇಬಲ್​​ಗಳಾದ ಮಂಜುನಾಥ್​ ಹಾಗೂ ಪಾಂಡುರಂಗ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಆದೇಶಿಸಿದ್ದಾರೆ.

Inspector Kathyayini
ಇನ್ಸ್​ಪೆಕ್ಟರ್​ ಕಾತ್ಯಾಯಿನಿ

ಬೆಂಗಳೂರು: ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಮಾರಾಟ ಆರೋಪ ಪ್ರಕರಣ ಸಂಬಂಧ ಅನಗತ್ಯವಾಗಿ ಠಾಣೆಗೆ ಕರೆಯಿಸಿ ಹಲ್ಲೆ ಮಾಡಿದ ಆರೋಪ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಕಾತ್ಯಾಯಿನಿ ಸೇರಿ ಮೂವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಆದೇಶಿಸಿದ್ದಾರೆ.

ಖಾಸಗಿ ಆಸ್ಪತ್ರೆ ವೈದ್ಯ ನಾಗರಾಜ್ ಎಂಬುವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನೆಪದಲ್ಲಿ ಅನಗತ್ಯವಾಗಿ ಠಾಣೆಯಲ್ಲಿ ಇರಿಸಿ ಲಾಠಿಯಿಂದ ಸಂಜಯನಗರ ಪೊಲೀಸರು ಥಳಿಸಿದ್ದರು. ಈ ವೇಳೆ ಹಣಕ್ಕೆ ಡಿಮ್ಯಾಂಡ್ ಆರೋಪ ಕೇಳಿಬಂದಿತ್ತು‌. ಇದಕ್ಕೆ‌ ಪುಷ್ಟಿ ಎಂಬಂತೆ ಹಲ್ಲೆ ಮಾಡಿ ಹಣ ಕೇಳಿದ್ದರು ಎಂದು ಆಪಾದಿಸಿದ ವಿಡಿಯೋ, ಹಿರಿಯ ಅಧಿಕಾರಿಗಳ ಗಮನಕ್ಕೂ ಹೋಗಿತ್ತು.

ಆರೋಪ ಕೇಳಿಬಂದ ಬೆನ್ನಲ್ಲೇ ಇನ್ಸ್​ಪೆಕ್ಟರ್​ ಕಾತ್ಯಾಯಿನಿ ಸೇರಿ ಮೂವರನ್ನು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದ್ದರು‌. ಆರೋಪದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ರೀನಾ ಸುವರ್ಣಗೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ‌ಕುಮಾರ್ ಮೀನಾ ಸೂಚಿಸಿದ್ದರು.

ಹೆಚ್ಚಿನ ಓದಿಗೆ : ಪೊಲೀಸರು ಸುಖಾಸುಮ್ಮನೆ ಮನಬಂದಂತೆ‌ ಥಳಿಸಿದ್ದಾರೆ : ಖಾಸಗಿ ಆಸ್ಪತ್ರೆ ವೈದ್ಯನಿಂದ ಆರೋಪ

ಆಂತರಿಕ ತನಿಖೆ ನಡೆಸಿ ವರದಿಯನ್ನು ಡಿಸಿಪಿಗೆ ಸಲ್ಲಿಸಿದ್ದರು. ನಂತರ ಇದೇ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೂ ಕಳುಹಿಸಿದ್ದರು. ಪರಿಶೀಲನೆ‌ ನಡೆಸಿದ ಮೇಲ್ನೊಟಕ್ಕೆ ತಪ್ಪು ಕಂಡು ಬಂದಿದ್ದರಿಂದ ಇನ್ಸ್​ಪೆಕ್ಟರ್ ಸೇರಿ ಇಬ್ಬರು ಹೆಡ್​ ಕಾನ್ಸ್​ಸ್ಟೇಬಲ್​​ಗಳಾದ ಮಂಜುನಾಥ್​ ಹಾಗೂ ಪಾಂಡುರಂಗ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.

ಓದಿ:ಚುನಾವಣೆ ಕರ್ತವ್ಯದಲ್ಲಿದ್ದು ಸೋಂಕಿಗೆ ಬಲಿಯಾದವರಿಗೆ 1 ಕೋಟಿ ನೀಡಿ: ಪರಿಹಾರ ಕೋರಿ ಹೈಕೋರ್ಟ್​ಗೆ ಅರ್ಜಿ

Last Updated : May 19, 2021, 5:29 PM IST

ABOUT THE AUTHOR

...view details