ಕರ್ನಾಟಕ

karnataka

ETV Bharat / state

ಮೇಜರ್ ಸರ್ಜರಿ : 25 ಐಎಎಸ್, 7 ಮಂದಿ ಐಎಫ್​ಎಸ್ ಅಧಿಕಾರಿಗಳ ವರ್ಗಾವಣೆ

25 ಮಂದಿ ಐಎಎಸ್ ಹಾಗೂ 7 ಮಂದಿ ಐಎಫ್​ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

By

Published : Oct 11, 2021, 10:57 PM IST

25-ias-and-7-ifs-officers-transferred
ಮೇಜರ್ ಸರ್ಜರಿ : 25 ಮಂದಿ ಐಎಎಸ್, 7 ಮಂದಿ ಐಎಫ್​ಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಐಎಎಸ್ ಹಾಗೂ ಐಎಫ್​​ಎಸ್​​ನಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. 25 ಮಂದಿ ಐಎಎಸ್ ಹಾಗೂ 7 ಮಂದಿ ಐಎಫ್​ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕೆಳಕಂಡ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಐಎಎಸ್ ಅಧಿಕಾರಿಗಳು :

ಬಿ.ಹೆಚ್. ಅನಿಲ್ ಕುಮಾರ್ -ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ.
ಕಪಿಲ್ ಮೋಹನ್ - ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ, ಕಾನೂನು ಮಾಪನಶಾಸ ಇಲಾಖೆ.
ಎಸ್.ಆರ್. ಉಮಾಶಂಕರ್ - ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ.
ಎಸ್. ಸೆಲ್ವಕುಮಾರ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿ/ಹೆಚ್ಚುವರಿಯಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕಾರ್ಯದರ್ಶಿ ಹುದ್ದೆ.
ನವೀನ್‍ರಾಜ್ ಸಿಂಗ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆ ಕಾರ್ಯದರ್ಶಿ/ಹೆಚ್ಚುವರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆ.
ಜೆ. ರವಿಶಂಕರ್ - ವಸತಿ ಇಲಾಖೆ ಕಾರ್ಯದರ್ಶಿ/ಹೆಚ್ಚುವರಿಯಾಗಿ ಅಬಕಾರಿ ಇಲಾಖೆ ಆಯುಕ್ತರ ಹುದ್ದೆ.
ಡಿ.ರಣದೀಪ್ - ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳ ಇಲಾಖೆ.
ಡಾ.ಕೆ.ವಿ. ತ್ರಿಲೋಕ್‍ಚಂದ್ರ - ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ ಮತ್ತು ಐಟಿ).
ಕೆ.ಪಿ. ಮೋಹನ್‍ರಾಜ್ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮ.
ಬಿ.ಬಿ. ಕಾವೇರಿ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಖನಿಜಗಳ ನಿಗಮ.
ಟಿ.ಎಚ್.ಎಂ. ಕುಮಾರ್- ಜವಳಿ ಅಭಿವೃದ್ಧಿ ಆಯುಕ್ತ, ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕ/ಹೆಚ್ಚುವರಿಯಾಗಿ ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ.
ಪ್ರಿಯಾಂಕಾ ಮೇರಿ ಪ್ರಾನ್ಸಿಸ್- ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
ಎಂ.ಕನಗವಲ್ಲಿ - ನಿರ್ದೇಶಕರು, ಸಮಗ್ರ ಮಕ್ಕಳ ರಕ್ಷಣಾ ಯೋಜನೆ.
ಡಾ.ವಿ. ರಾಮ್ ಪ್ರಶಾಂತ್ ಮನೋಹರ - ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ.
ಆರ್.ವೆಂಕಟೇಶ್ ಕುಮಾರ್ -ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ.
ಚಾರುಲತಾ ಸೋಮಲ್- ಜಿಲ್ಲಾಧಿಕಾರಿ, ರಾಯಚೂರು.
ಸಿ.ಟಿ. ಶಿಲ್ಪಾ ನಾಗ್ -ಆಯುಕ್ತರು, ಪಂಚಾಯತ್ ರಾಜ್ ಇಲಾಖೆ.
ಕೆ.ಲಕ್ಷ್ಮೀ ಪ್ರಿಯಾ- ನಿರ್ದೇಶಕರು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ.
ಬೋಯರ್ ಹರ್ಷಲ್ ನಾರಾಯಣರಾವ್- ನೂತನ ಜಿಲ್ಲೆ ವಿಜಯನಗರದ ಜಿಲ್ಲಾ ಪಂಚಾಯಿತಿ ಸಿಇಒ.
ಉಕೇಶ್ ಕುಮಾರ್‌ -ಕೋಲಾರ ಜಿ.ಪಂ ಸಿಇಒ.
ಡಾ. ಬಿ.ಸಿ.ಸತೀಶ್‌- ಜಿಲ್ಲಾಧಿಕಾರಿ, ಕೊಡಗು.
ಡಾ.ಎಚ್.ಎನ್. ಗೋಪಾಲ ಕೃಷ್ಣ - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ/ಹೆಚ್ಚುವರಿಯಾಗಿ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ.
ಎನ್.ಎಂ. ನಾಗರಾಜ- ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಸಚಿವ.
ಶಿವಾನಂದ ಕಾಪಸಿ - ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ.‌
ಎಂ.ಎಸ್. ಅರ್ಚನಾ- ನಿರ್ದೇಶಕರು, ಪೌರಾಡಳಿತ.
ಕೆ.ಎಂ. ಗಾಯತ್ರಿ - ವ್ಯವಸ್ಥಾಪಕ ನಿರ್ದೇಶಕರು, ಚಾಮರಾಜನಗರ ಜಿಲ್ಲಾ ಪಂಚಾಯ್ತಿ ಸಿಇಒ.
ಡಾ.ಕೆ.ಎನ್. ಅನುರಾಧ -ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ.

ಅಧಿಸೂಚನೆ ಪ್ರತಿ

ಐಎಫ್​ಎಸ್ ಅಧಿಕಾರಿಗಳು :

ಅರಣ್ಯ ಇಲಾಖೆಯ ಏಳು ಮಂದಿ ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಸುಭಾಷ್ ಕೆ. ಮಾಲ್ಖಡೆ -ಅರಣ್ಯ ಇಲಾಖೆಯ ಕಾರ್ಯ ಯೋಜನೆ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್).
ಜಗ ಮೋಹನ್ ಶರ್ಮಾ - ಎನ್ವಿರಾಯನ್ಮೆಂಟ್ ಮ್ಯಾನೇಜ್‌ಮೆಂಟ್ ಅಂಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್(ಎಂಪ್ರಿ)ಯ ಪ್ರಧಾನ ವ್ಯವಸ್ಥಾಪಕರು.
ಕುಮಾರ್ ಪುಷ್ಕರ್- ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ.
ಮನೋಜ್ ಕುಮಾರ್ - ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್‌ಸ್(ಜೆಎಲ್‌ಆರ್)ನ ವ್ಯವಸ್ಥಾಪಕ ನಿರ್ದೇಶಕರು.
ಆರ್.ರವಿಶಂಕರ್- ಅರಣ್ಯ ಸಂಶೋಧನಾ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ.
ಮನೋಜ್ ಕುಮಾರ್ ತ್ರಿಪಾಠಿ- ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್).
ಉಪೇಂದ್ರ ಪ್ರತಾಪ ಸಿಂಗ್- ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್).

ಇದನ್ನೂ ಓದಿ:ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ನಾಳೆ ಕರೆಂಟ್ ಇರಲ್ಲ​.. ಯಾವೆಲ್ಲ ಪ್ರದೇಶಗಳಲ್ಲಿ ವ್ಯತ್ಯಯ?

ABOUT THE AUTHOR

...view details