ಬೆಂಗಳೂರು: ಕೊರೊನಾ ಕಂಟಕದೊಂದಿಗೆ ಲಾಕ್ಡೌನ್ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದವರಿಗೆ, ಸರ್ಕಾರ ಆರ್ಥಿಕ ಸಹಾಯ ಮಾಡಲು ಮುಂದಾಗಿ, ಇಂತಿಷ್ಟು ವರ್ಗಕ್ಕೆ ಇಷ್ಟು ಅಂತ ಆರ್ಥಿಕ ಬಲ ತುಂಬಲು ವಿಶೇಷ ಪ್ಯಾಕೇಜ್ ಘೋಷಣೆಯನ್ನೂ ಮಾಡಿತ್ತು.
ಅದರಲ್ಲಿ, ಚಾಲಕರಿಗೆ 5,000 ಪರಿಹಾರ ನೀಡುತ್ತೇವೆ ಎಂದು ಘೋಷಣೆ ಮಾಡಿ 11 ದಿನ ಕಳೆದರೂ ಪರಿಹಾರ ಧನ ಸಿಗುವ ಯಾವುದೇ ಮುನ್ಸೂಚನೆಗಳು ಕಂಡು ಬರುತ್ತಿಲ್ಲ ಎಂದು ಆಟೋ ಮತ್ತು ಟ್ಯಾಕ್ಸಿ ಚಾಲಕ ಸಂಘಟನೆಗಳು ಆಕ್ರೋಶ ಹೊರಹಾಕಿ, ಇಂದು ಶಾಂತಿನಗರದಲ್ಲಿರುವ ಸಾರಿಗೆ ಆಯುಕ್ತರ ಕಚೇರಿ ಮುಂಭಾಗ ಸರ್ಕಾರ ಸುಳ್ಳು ಘೋಷಣೆ ಮಾಡಿದೆ ಎಂದು 11ನೇ ದಿನದ ತಿಥಿ ಕಾರ್ಯಮಾಡಿ ಎಳ್ಳುನೀರು ಬಿಟ್ಟಿದ್ದಾರೆ.